October 18, 2024

MALNAD TV

HEART OF COFFEE CITY

ರಾಜ್ಯ ಸರ್ಕಾರ ಬಂದು ಒಂದು ವರ್ಷದಲ್ಲಿ 1185 ರೈತರು ಆತ್ಮಹತ್ಯೆ : ಗುರುಶಾಂತಪ್ಪ

1 min read

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ಕಳೆದಿದ್ದು ರಾಜ್ಯದಲ್ಲಿ 1185 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನ್ನದಾತ ಪಂಪ್ ಸೆಟ್ ಗೆ ವಿದ್ಯುತ್ ಸಂಪರ್ಕ ಪಡೆಯಲು 3 ಲಕ್ಷ ಕೊಡಬೇಕಿದೆ ರೈತ ವಿರೋಧಿ 3 ಕರಾಳ ಕಾನೂನು ಕೇಂದ್ರ ಸರ್ಕಾರ ವಾಪಸ್ ಪಡೆದರೂ ರಾಜ್ಯ ಸರ್ಕಾರ ಪಡೆದಿಲ್ಲ ಈ ಇದರ ಜೊತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇದೇ ಜುಲೈ18 ರಂದು ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಹೇಳಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆ ಎಲ್ಲಾ ರೈತರಿಗೂ ತಲುಪುತ್ತಿಲ್ಲ ಬೆರಳೆಣಿಕೆಯಷ್ಟು ಅನ್ನದಾತರಿಗೆ ಮಾತ್ರ ಸಿಗುತ್ತಿದೆ ದೇಶದಲ್ಲಿ ರೈತ ಉತ್ಪಾದಿಸುತ್ತಿರುವ ಶೇಕಡಾ 6-8 ರಷ್ಟು ಬೆಳೆಗಳನ್ನು ಮಾತ್ರ ಸರ್ಕಾರ ಕೊಳ್ಳುತ್ತಿದೆ, ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ , ಖರೀದಿದಾರರು ಹಾಗೂ ಸರ್ಕಾರದ ನಡುವೆ ಅಂಡರ್ ಸ್ಟಾಂಡಿಂಗ್ ಇದೆ ಎಂದು ಗುರುಶಾಂತಪ್ಪ ಆರೋಪಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!