ಶ್ರೀ ಗುರು ಶರಣ ಹೂವಾಡಿಗ ಮಾದಣ್ಣನವರ ಜಯಂತೋತ್ಸವ..!
1 min read
ಶ್ರೀ ಗುರು ಶರಣ ಹೂವಾಡಿಗ ಮಾದಣ್ಣನವರ ಜಯಂತೋತ್ಸದ ಅಂಗವಾಗಿ ಇಂದು ಸಖರಾಯಪಟ್ಟಣ ಹೋಬಳಿ ನಿಲ್ಲೆನಹಳ್ಳಿಯಲ್ಲಿ ಗುರು ಶರಣ ಹೂವಾಡಿಗ ಮಾದಣ್ಣನವರ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಅವರ ಪತ್ರಿಕೆಯನ್ನು ಸಮುದಾಯದ ಮುಖಂಡರಾದ ಗೌರವಾಧ್ಯಕ್ಷರು ಮಾಳಪ್ಪ ಮಾಸ್ಟ್ರು ಹಾಗೂ ಸಮುದಾಯದ ಮುಖಂಡರಾದ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಲಕ್ಷ್ಮೀದೇವಿ ಜನಾರ್ಧನ್ ಅವರು ಬಿಡುಗಡೆ ಮಾಡಿದರು ಎಂದು ಜಿಲ್ಲಾ ಕಾರ್ಯದರ್ಶಿ ಸಿ ಡಿ ವಿನಯ್ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಸಿ.ಆರ್ ರಘು ಹಾಗು ಜಿಲ್ಲಾಧ್ಯಕ್ಷರಾದ ಆನಂದ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜನಾರ್ಧನ್ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g