ಅಭಿವೃದ್ದಿ ಕುರಿತು ಶಾಸಕ ತಮ್ಮಯ್ಯ ಸಿ.ಟಿ ರವಿ ಜೊತೆ ಬಹಿರಂಗ ಚರ್ಚೆಗೆ ಬರಲಿ
1 min readಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಕಳೆದ ಒಂದು ವರ್ಷದಲ್ಲಿ 160 ಕೋಟಿ ಅನುದಾನ ತಂದಿದ್ದೇನೆ ಎಂದಿರುವ ಶಾಸಕ ಎಚ್ ಡಿ ತಮ್ಮಯ್ಯ ಈ ಕುರಿತು ವೈಟ್ ಪೇಪರ್ ಬಿಡುಗಡೆ ಮಾಡಲಿ, ಅಲ್ಲದೇ ಮಾಜಿ ಶಾಸಕ ಸಿ.ಟಿ ರವಿ ಜೊತೆ ಬಹಿರಂಗ ಚರ್ಚೆಗೆ ಬರಲಿ ಎಂದು ಜಿಲ್ಲಾ ಬಿಜೆಪಿ ಸವಾಲು ಎಸೆದಿದೆ.
ಮೊನ್ನೆಯಷ್ಟೆ ವರ್ಷ ಪೂರೈಸಿದ ಚಿಕ್ಕಮಗಳೂರು ಶಾಸಕ ಎಚ್.ಡಿ ತಮ್ಮಯ್ಯ ಕಳೆದ ಒಂದು ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ 160 ಕೋಟಿ ಹಣ ಮಂಜೂರು ಮಾಡಿಸಿರುವುದಾಗಿ ತಿಳಿಸಿದ್ದರು. ಇದಕ್ಕೆ ಕೌಂಟರ್ ಕೊಟ್ಟಿರುವ ಬಿಜೆಪಿ ಒಂದು ವರ್ಷದ ತಮ್ಮಯ್ಯ ಅಭಿವೃದ್ಧಿ ಶೂನ್ಯವಾಗಿದ್ದು ಏನೊ ಸಾಧನೆ ಮಾಡಿದ್ದೇನೆ ಎನ್ನುತ್ತಿರುವುದೆ ಹಾಸ್ಯಾಸ್ಪದ ಎಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಬಿಜೆಪಿ ವಕ್ತಾರ ಎಚ್ಎಸ್ ಪುಟ್ಟಸ್ವಾಮಿ ಲೇವಡಿ ಮಾಡಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಎಚ್ಡಿ ತಮ್ಮಯ್ಯ ಶಾಸಕರಾದ ಮೇಲೆ ವ್ಯಾಪಕ ಭ್ರಷ್ಟಾಚಾರ ಹೆಚ್ಚಿದ್ದು ಎಲ್ಲಾ ಇಲಾಖೆಗಳಲ್ಲೂ ಲಂಚಾವತಾರ ತಾಂಡವ ಆಡುತ್ತಿದೆ ಎಂದು ಆರೋಪಿಸಿದರು. ಶಾಸಕರಾದ ನಂತರ ಯಾವುದೇ ವಿಶೇಷ ಅನುದಾನ ತಮ್ಮಯ್ಯ ತಂದಿಲ್ಲ ಎಂದಿರುವ ಪುಟ್ಟಸ್ವಾಮಿ ಕಳೆದ ಒಂದು ವರ್ಷದಲ್ಲಿ ತಂದಿರುವ ಅನುದಾನ ಕುರಿತು ಶ್ವೇತ ಪತ್ರ ಹೊರಡಿಸಲಿ ಅಲ್ಲದೇ ಈ ಕುರಿತು ಬಹಿರಂಗ ಚರ್ಚೆಗೆ ಬರಲಿ ಇದಕ್ಕೆ ಮಾಜಿ ಶಾಸಕ ಸಿ.ಟಿ ರವಿ ಕೂಡಾ ಸಿದ್ದರಿದ್ದಾರೆ ನೀವೇ ದಿನಾಂಕ ನಿಗದಿ ಪಡಿಸಿ ಎಂದು ಕಾಂಗ್ರೆಸ್ ನವರಿಗೆ ಪಂಥಾಹ್ವಾನ ನೀಡಿದ್ದಾರೆ .ಅಭಿವೃದ್ದಿ ಕುರಿತು ಶಾಸಕ ತಮ್ಮಯ್ಯ ಸಿ.ಟಿ ರವಿ ಜೊತೆ ಬಹಿರಂಗ ಚರ್ಚೆಗೆ ಬರಲಿ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g