October 18, 2024

MALNAD TV

HEART OF COFFEE CITY

ಯಡಿಯೂರಪ್ಪ ಇದ್ದರೆ ಸದ್ಯದಲ್ಲೇ ಬಿಜೆಪಿ ಅಡ್ರೆಸ್ ಇಲ್ಲದೇ ಹೋಗುತ್ತದೆ : ಈಶ್ವರಪ್ಪ ಆಕ್ರೋಶ

1 min read

ರಾಜ್ಯ ಬಿಜೆಪಿ ಯಡಿಯೂರಪ್ಪ ಮತ್ತು ಮಕ್ಕಳ ಕೈಯಲ್ಲಿ ಸಿಲುಕಿ ಕೊಂಡಿದ್ದು ಸದ್ಯದಲ್ಲೇ ಅಡ್ರಸ್ ಇಲ್ಲದೆ ಹೋಗುತ್ತದೆ, ಪಕ್ಷದ ಕೇಂದ್ರ ನಾಯಕರು ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಡಿ.ಸಿಎಂ ಕೆ.ಎಸ್ ಈಶ್ವರಪ್ಪ ಕೆಂಡ ಕಾರಿದ್ದಾರೆ.

ಲೋಕಸಭೆ ಚುನಾವಣೆ ಮತ ಎಣಿಕೆ ನಂತರ ಯಡಿಯೂರಪ್ಪ ಮತ್ತವರ ಮಕ್ಕಳಿಂದ ಬಿಜೆಪಿ ಮುಕ್ತ ಮಾಡುವ ಅಪೇಕ್ಷೆಗೆ ಮತ್ತಷ್ಟು ಒತ್ತು ಸಿಗಲಿದೆ ಎಂದು ಬಿಜೆಪಿ ಉಚ್ಚಾಟಿತ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಚಿಕ್ಕಮಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿಯಲ್ಲಿ ಉಚ್ಚಾಟನೆಗೆ ಯಾವುದೇ ಬೆಲೆ ಇಲ್ಲ ಪಕ್ಷ ತಾಯಿ ಇದ್ದಂತೆ ಮತ್ತೆ ಬಿಜೆಪಿಗೆ ಹೋಗುತ್ತೇವೆ ಎಂದು ವಿಶ್ವಾಸದಿಂದ ಹೇಳಿದ್ದಾರೆ. ಬಿಜೆಪಿ ಶುದ್ದೀಕರಣ ಆಗಬೇಕಿದೆ ನೈರುತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ರಘುಪತಿ ಭಟ್ ಗೆಲುವು ಸಾಧಿಸಲಿದ್ದು, ಬಿಜೆಪಿ ಪಕ್ಷದ ಕಾರ್ಯಕರ್ತರು ಹಿಂದಿನಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ ಅವರು ಲಕ್ಷಾಂತರ ಕಾರ್ಯಕರ್ತರ ಬಳಗ ನೋವಿನಲ್ಲಿದ್ದಾರೆ, ಸಿದ್ಧಾಂತ ಇರುವವರು ಹೆದರದೆ ಇರಿ ಯಶಸ್ಸು ಆಗುತ್ತೆ ಎಂದರು. ನಕ್ಸಲರು ಮುಸ್ಲಿಂ ಗೂಂಡಾಗಳು ಕ್ರಿಶ್ಚಿಯನ್ ರನ್ನು ಸೇರಿಸಿಕೊಂಡು ಹರ್ಷ ಕೊಲೆ ಕೇಸ್ ನಲ್ಲಿ ಧನಂಜಯ ಸರ್ಜಿ ಶಾಂತಿಗಾಗಿ ನಡಿಗೆ ಶಿವಮೊಗ್ಗದಲ್ಲಿ ನಡೆಸಿದ್ರು ಏಕೆ ಅವರಿಗೆ ಟಿಕೆಟ್ ಕೊಟ್ರಿ ಎಂದು ಪ್ರಶ್ನೆ ಮಾಡಿದ ಈಶ್ವರಪ್ಪ ಕೇಂದ್ರ ವರಿಷ್ಟರು ಭ್ರಮೆಯಿಂದ ಹೊರಗೆ ಬನ್ನಿ ಎಂದ್ರು
ಯಡಿಯೂರಪ್ಪ ಸ್ವಾರ್ಥಿಯಾಗಿದ್ದು ಜಾತಿ ಹಾಗೂ ಹಣದ ಪ್ರಭಾವದಿಂದ ಬೀಗುತ್ತಿದ್ದಾರೆ ಎಂದಿದ್ದಾರೆ. ಮೊದಲು ಬಿಜೆಪಿಲಿ ಸಾಮೂಹಿಕ ನಾಯಕತ್ವ ಇತ್ತು ಆದರೆ ಇವಾಗ ಇಲ್ಲ ಎಂದಿರುವ ಈಶ್ವರಪ್ಪ ನನ್ನ ಮುಟ್ಟೋ ಧೈರ್ಯ ಯಾರಿಗೂ ಇಲ್ಲ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!