October 18, 2024

MALNAD TV

HEART OF COFFEE CITY

ಕಾಡಾನೆ ಆಯ್ತು ಇದೀಗ ವ್ಯಾಘ್ರ ಕಾಟ : ಕಾಫಿತೋಟದ ಬಳಿ ಕಾಣಿಸಿಕೊಂಡ ಹುಲಿ

1 min read

 

 

ಕಾಡಾನೆಗಳ ಕಾಟದ ನಡುವೆ ಮಲೆನಾಡಿನ ಕೆಲವೆಡೆ ಹುಲಿಯ ಆತಂಕವು ಕಾಡುತ್ತಿದೆ. ಚಿಕ್ಕಮಗಳೂರಿನ ಹಿರೇಕೊಳಲೆ ಸಮೀಪದ ಚನ್ನಗೊಂಡನಹಳ್ಳಿ ಬಳಿ ಇಂದು ವ್ಯಾಘ್ರವೊಂದು ಕಾಣಿಸಿಕೊಂಡು ಸ್ಥಳೀಯರನ್ನು ಭಯಭೀತರನ್ನಾಗಿಸಿದೆ. ಕಾಫಿತೋಟ ಗಳ ನಡುವೆ ಹುಲಿಯ ಓಡಾಟ ಎಸ್ಟೇಟ್ ಕೂಲಿ ಕಾರ್ಮಿಕರಲ್ಲಿ ಭಯ ಹೆಚ್ಚಿಸಿದೆ.

 

ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಯಿಂದ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ನಡುವೆ ಇದೀಗ ಕಾಫಿ ತೋಟಗಳ ಮಧ್ಯೆ ವ್ಯಾಘ್ರ ಸಂಚಾರ ಕಾರ್ಮಿಕರನ್ನು ಕಾಡುತ್ತಿದೆ. ಇಂದು ಚಿಕ್ಕಮಗಳೂರು ತಾಲೂಕಿನ ಹಿರೇಕೊಳಲೆ ಸಮೀಪದ ಚನ್ನಗೊಂಡನಹಳ್ಳಿ ಬಳಿ ಹುಲಿಯೊಂದು ಪತ್ಯಕ್ಷವಾಗಿದೆ. ಬೆಳ್ಳಂಬೆಳಿಗ್ಗೆ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನ ಸಂಚಾರರಿಗೆ ಈ ವ್ಯಾಘ್ರ ಕಾಣಿಸಿಕೊಂಡಿದೆ.‌ ಬಾಗ್ ಮನೆ ಎಸ್ಟೇಟ್ ನ ಕಾಫಿತೋಟದ ಒಳಗಿಂದ ಹುಲಿ ಬರುತ್ತಿದ್ದಂತೆ ಗಾಬರಿಗೊಂಡ ಟ್ರಾಕ್ಟರ್ ಸವಾರ ವಾಹನವನ್ನು ಬಿಟ್ಟು ಪರಾರಿಯಾಗಿ ಓಡಿ ಹೋಗಿದ್ದಾನೆ. ಮುಂಜಾನೆ ಕೆಲಸಕ್ಕೆ ಬಂದಿದ್ದ ಕಾರ್ಮಿಕರಿಗೆ ಆತಂಕ ಹೆಚ್ಚಾಗಿದ್ದು ಹುಲಿ ಹಿಡಿಯುವಂತೆ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಆಗ್ರಹಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!