ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಗೂಂಡಾಗಳು ನಿರ್ಭಯವಾಗಿದ್ದಾರೆ : ಸಿ.ಟಿ ರವಿ
1 min read
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೊಲೆಗಳು ಹೆಚ್ಚುತ್ತಿದ್ದು ಜನ ಸಾಮಾನ್ಯರಿಗಿಂತ ಗೂಂಡಾಗಳು ನಿರ್ಭಯವಾಗಿದ್ದು ಜನರ ನೆಮ್ಮದಿಗೆ ಕೊಳ್ಳಿ ಇಡುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ನಿಯೋಜಿತ ಎಂಎಲ್.ಸಿ ಸಿ.ಟಿ ರವಿ ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಮಾರಂಭ ನಂತರ ಮಾತನಾಡಿದ ರವಿ ರಾಜ್ಯ ಗೃಹ ಇಲಾಖೆ ದುರ್ಬಲ ಆಗಿದ್ದು ಸಿ.ಎಂ ರೇಸ್ ನಲ್ಲಿದ್ದ ಪರಮೇಶ್ವರ್ ಹತಾಶೆಯಿಂದ ವರ್ತಿಸುತ್ತಿದ್ದು, ಇದೇ ರೀತಿ ಆದರೆ ರಾಜ್ಯ ಎಲ್ಲಿ ಹೋಗಿ ನಿಲ್ಲುತ್ತೊ ಗೊತ್ತಿಲ್ಲ ಎಂದಿದ್ದಾರೆ. ಇದೇ ವೇಳೆ ಮಾತನಾಡಿದ ಸಿ.ಟಿ ರವಿ ರಾಜ್ಯ ಸರ್ಕಾರವನ್ನು ಕೋಮುವಾದಿ ಸರ್ಕಾರ ಎಂದಿದ್ದಾರೆ, ಅಲ್ಲದೇ ರಾಜ್ಯ ಕೋಮುವಾದಿಗಳ ಅಖಾಡ ಆಗುತ್ತಿರುವುದು ದುರ್ದೈವದ ಸಂಗತಿ ಎಂದಿರುವ ಅವರು ಹೀಗೆ ಮುಂದುವರಿದರೆ ಜನ ಆಕ್ರೋಶ ಗೊಂಡು ಬಂಡಾಯ ಏಳುವ ದಿನ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.
ಐ.ಡಿ ಪೀಠದಲ್ಲಿ ಹಿಂದು ಅರ್ಚಕರಿಗೆ ಸಂಬಳ ನೀಡದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರವಿ ನಮಗೆ ಸಂಬಳ ಕೊಡಲು ಯೋಗ್ಯತೆ ಇಲ್ಲ ಪಾಪರ್ ಆಗಿದ್ದೇವೆ ಎನ್ನಿ ನಾವೇ ಅರ್ಚಕರಿಗೆ ಸಂಬಳ ಕೊಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g