ಸಿ.ಟಿ ರವಿಗೆ ಸಾಮಾನ್ಯ ತಿಳುವಳಿಕೆ ಇಲ್ಲ ಎಂಬ ಅರ್ಥದಲ್ಲಿ ಟಾಂಗ್ ಕೊಟ್ಟ ಶಾಸಕ ಎಚ್.ಡಿ ತಮ್ಮಯ್ಯ
1 min read
ಡೆಂಗ್ಯೂ ಹೆಚ್ಚಳದ ಕುರಿತಾಗಿ ಮಾತನಾಡುವ ವೇಳೆಯಲ್ಲಿ ಜನರ ಸಮಸ್ಯೆಗಳಿಗೂ ನಮಗೂ ಸಂಬಂಧವೇ ಇಲ್ಲದಂತೆ ಜನಪ್ರತಿನಿಧಿಗಳು ವರ್ತಿಸುತ್ತಿದ್ದಾರೆ ಎಂಬ ಸಿ.ಟಿ ರವಿ ಹೇಳಿಕೆಗೆ ಚಿಕ್ಕಮಗಳೂರು ಶಾಸಕ ಎಚ್.ಡಿ ತಮ್ಮಯ್ಯ ಸಖತ್ ಟಾಂಗ್ ಕೊಟ್ಟಿದ್ದಾರೆ. ಸಾಮಾನ್ಯ ತಿಳುವಳಿಕೆ ಸಿ.ಟಿ ರವಿಗೆ ಇಲ್ಲ ಎಂಬ ಅರ್ಥದಲ್ಲಿ ತಮ್ಮಯ್ಯ ಪ್ರತ್ಯುತ್ತರ ಕೊಟ್ಟಿದ್ದು ನೀತಿ ಸಂಹಿತೆ ಜಾರಿಯಲ್ಲಿ ಇರುವ ವೇಳೆ ಅಧಿಕಾರಿಗಳ ಜೊತೆ ಸಭೆ ನಡೆಸುವುದು ಸರಿಯೇ ನೀವೆ ಹೇಳಿ ಎಂದು ಪತ್ರಕರ್ತರಿಗೆ ಕೇಳಿದರು. ಸಿ.ಟಿ ರವಿ ತುಂಬಾ ದೊಡ್ಡವರು ನಾಲ್ಕು ಬಾರಿ ಶಾಸಕರಾಗಿ ಮಂತ್ರಿ ಆಗಿದ್ದವರು, ಎಂದಿರುವ ತಮ್ಮಯ್ಯ ನೀತಿ ಸಂಹಿತೆ ಇದ್ದಾಗ್ಯೂ ನಾನು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದೂ ಅಲ್ಲದೇ ಡಿ.ಸಿ,, ಡಿ.ಎಸ್ ಡಿಎಚ್.ಓ ಅವರಿಗೆ ಸೂಚನೆ ನೀಡಿದ್ದೆ ಎಂದರು.
ಇಡೀ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಕೇವಲ 25 ಡೆಂಗ್ಯೂ ಪಾಸಿಟಿವ್ ಕೇಸ್ ಗಳು ಮಾತ್ರ ಇದ್ದು ಸಾರ್ವಜನಿಕರು ಗಾಬರಿಯಾಗೊದು ಬೇಡ ಎಂದು ಎಚ್.ಡಿ ತಮ್ಮಯ್ಯ ತಿಳಿಸಿದರು. ವಿನಾಕಾರಣ ಖಾಸಗಿ ನರ್ಸಿಂಗ್ ಹೋಮ್ ಗಳು ಜನರಲ್ಲಿ ಡೆಂಗ್ಯೂ ಭೀತಿ ಹುಟ್ಟಿಸಿದರೆ ಅಲ್ಲಿಗೆ ವಿಸಿಟ್ ಕೊಟ್ಟು ಸೂಕ್ತ ಕ್ರಮ ಕೈಗೊಳ್ಳಿ ಎಂದು ಸ್ಥಳದಲ್ಲಿ ಇದ್ದ ಡಿಎಚ್ಓ ಡಾ ಅಶ್ವಥ್ ಬಾಬು ಅವರಿಗೆ ತಮ್ಮಯ್ಯ ಸೂಚನೆ ನೀಡಿದರು. ಇದೇ ವೇಳೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡೆಂಗ್ಯೂ ರೋಗಿಗಳ ಆರೋಗ್ಯವನ್ನು ಶಾಸಕ ಎಚ್.ಡಿ ತಮ್ಮಯ್ಯ ವಿಚಾರಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಚಿಕಿತ್ಸೆಗೆ ಕೊರತೆ ಇಲ್ಲ ಎಂದು ಸ್ಪಷ್ಟನೆ ನೀಡಿದ ಡಿಎಚ್ ಓ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಇದುವರೆಗೂ ಯಾರೂ ಕೂಡಾ ಡೆಂಗ್ಯೂನಿಂದ ಮೃತಪಟ್ಟಿಲ್ಲ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g