ಜಿ.ಪಂ ಕೆಡಿಪಿ ಸಭೆಯಲ್ಲಿ ಕುರ್ಚಿಗಾಗಿ ಎಂಎಲ್ಎ ಎಂಎಲ್ ಸಿಗಳ ಕಿತ್ತಾಟ
1 min readಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯ ಆರಂಭದಲ್ಲೇ ಶಾಸಕರು ಕುರ್ಚಿಗಾಗಿ ಕಿತ್ತಾಟಕ್ಕೆ ಇಳಿದಿದ್ದು ಸ್ಥಳದಲ್ಲಿದ್ದ ಎಸ್ಪಿ-ಡಿಸಿ-ಸಿಇಓ ಹೈರಾಣಾದ ಘಟನೆ ನಡೆದಿದೆ. ಇಂದು ನಡೆದ ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಶಾಸಕರ ಹೈಡ್ರಾಮಾ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿತ್ತು. ಶಾಸಕರು ಮೇಲೆ ಕೂರುವುದು ತಪ್ಪು ಎಂದು ಆಕ್ಷೇಪ ವ್ಯಕ್ತಪಡಿಸಿ ಪರಿಷತ್ ಸದಸ್ಯರಾದ ಸಿ.ಟಿ ರವಿ, ಎಸ್.ಎಲ್ ಭೋಜೇಗೌಡ ಆಕ್ರೋಶ ಹೊರಹಾಕಿದರು. ಈ ವೇಳೆ ಮೇಲೆ ಕೂತೇ ಕೂರುತ್ತೇನೆ ಎಂದು ಕಡೂರು ಕಾಂಗ್ರೆಸ್ ಶಾಸಕ ಆನಂದ್ ಪಟ್ಟು ಹಿಡಿದು ಪರಿಷತ್ ಸದಸ್ಯ ಸ್ಥಾನ ಸಾಂವಿಧಾನಿಕ ಹುದ್ದೆಯೇ ಅಲ್ಲ ಎಂದು ಆನಂದ್ ವಾದಿಸಿದರು. ಶಾಸಕ ಆನಂದ್ ಮಾತಿಗೆ ಸಿ.ಟಿ.ರವಿ ಕೆಂಡಾಮಂಡಲರಾದರು. ರವಿಗೆ ಎಸ್.ಎಲ್ ಭೋಜೇಗೌಡ, ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ದನಿಗೂಡಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಎಲ್ಲರನ್ನೂ ಸಮಾಧಾನ ಮಾಡಲು ಮುಂದಾದ್ರು ಕೊನೆಗೆ ಕಾಂಗ್ರೆಸ್ ಶಾಸಕರು ವೇದಿಕೆ ಮೇಲೆ ಕುಳಿತರೆ ಬಿಜೆಪಿ ಎಂಎಲ್.ಸಿ ಗಳು ವೇದಿಕೆಯ ಕೆಳಗೆ ಕುಳಿತರು.
ಕೆಡಿಪಿ ಸಭೆಯಲ್ಲಿ ಶಾಸಕರು ಎಂದೂ ವೇದಿಕೆ ಮೇಲೆ ಕೂರುತ್ತಿರಲಿಲ್ಲ ಇದು ಶಿಷ್ಟಾಚಾರದ ಉಲ್ಲಂಘನೆ ಎಂದು ಸಿ.ಟಿ ರವಿ ಹೇಳಿದರು. ಘಟನೆಗೆ ಸಾಕ್ಷಿಯಾದ ಚಿಕ್ಕಮಗಳೂರು
ಜಿಲ್ಲಾ ಪಂಚಾಯ್ತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಕೆಡಿಪಿ ಸಭೆ ನಂತರ ಮುಂದುವರೆಯಿತು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g