ಖುದ್ದು ಫೀಲ್ಡ್ ಗೆ ಇಳಿದು ಟೂರಿಸ್ಟ್ ಗಳಿಗೆ ಶಾಕ್ ಕೊಟ್ಟ ಎಸ್.ಪಿ
1 min readಬೆಳ್ಳಂ ಬೆಳಗ್ಗೆ ಜಿಟಿ ಜಿಟಿ ಮಳೆಯಲ್ಲಿ ನೆನೆದು ಸುಂದರ ಪ್ರವಾಸಿ ತಾಣಗಳನ್ನ ನೋಡೋಣ ಅಂತಾ ಬಂದ ಟೂರಿಸ್ಟ್ ಗಳಿಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಗಿರಿಯ ಮಡಿಲಲ್ಲಿ ಕುಳಿತು ಹಾಟ್ ಹಾಟ್ ಆಗಿ ಎಣ್ಣೆ ಹೊಡೆಯೋಣ ಅಂತ ಆಸೆ ಇಟ್ಕೊಂಡಿದ್ದವರಿಗೂ ಕಂಗಾಲಾಗಿದ್ರು ಕಾಫಿನಾಡಲ್ಲಿ ಬೆಳ್ಳಂ ಬೆಳಗ್ಗೆ ಫೀಲ್ಡ್ ಗೆ ಇಳಿದಿದ್ದು ಖುದ್ದು ಎಸ್ಪಿ ವಿಕ್ರಮ್ ಅಮಟೆ,
ಕಾರಿನ ಡಿಕ್ಕಿ ಬ್ಯಾಗುಗಳಲ್ಲಿ ಅವಿತು ಇಟ್ಟಿದ್ದ ಎಣ್ಣೆ ಬಾಟಲ್ ಗಳನ್ನು ಸೀಜ್ ಮಾಡ್ತಿರೋ ಸಿಬ್ಬಂದಿಗಳು..!. ಒಂದ ಎರಡ ಕೇಸ್ ಗಟ್ಟಲೆ ಎಣ್ಣೆ, ಪಾನ್ ಪರಾಕ್, ಸಿಗರೇಟು, ಬೀಡಿ, ನೀರಿನ ಬಾಟಲ್ ಪ್ಲಾಸ್ಟಿಕ್ ಎಲ್ಲವೂ ಸೀಜ್…ಸೀಜ್…!. ಹೌದು ಇದು ಕಾಫಿ ನಾಡು ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್ ಪೋಸ್ಟ್ ನಲ್ಲಿ ಪ್ರವಾಸಿಗರಿಗೆ ಬೆಳ್ಳಂ ಬೆಳಗೆ ಪೊಲೀಸರು ನೀಡಿದ ಶಾಕ್…!. ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಇತ್ತೀಚಿಗೆ ಕೆಲವು ಪ್ರವಾಸಿಗರ ಹುಚ್ಚಾಟ, ತರಲೆ, ಕೀಟಲೆ ಹೆಚ್ಚಾದ ಬೆನ್ನಲ್ಲೇ ಜಿಲ್ಲೆಯ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಖುದ್ದು ಎಸ್.ಪಿ ಡಾ ವಿಕ್ರಂ ಅಮಟೆ ದತ್ತಪೀಠ, ಮುಳ್ಳಯ್ಯನಗಿರಿ, ಮಾಣಿಕ್ಯದಾರಕ್ಕೆ ಹೋಗುವ ಮಾರ್ಗದಲ್ಲಿರೋ ಕೈಮರ ಚೆಕ್ ಪೋಸ್ಟ್ ನಲ್ಲಿ ಕಾರ್ಯಾಚರಣೆ ನಡೆಸಿ ಪ್ರವಾಸಿಗರ ವಾಹನಗಳಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ಮದ್ಯ ವನ್ನು ಸೀಜ್ ಮಾಡಿ ಚಳಿಯಲ್ಲೂ ಬೆವರು ಇಳಿಯುವಂತೆ ಮಾಡಿದ್ರು. ಅಷ್ಟೇ ಅಲ್ಲ ಬರೋಬರಿ 20ಕ್ಕೂ ಹೆಚ್ಚು ವಾಹನಗಳಲ್ಲಿ ಟೂರಿಸ್ಟ್ ಗಳು ತಂದಿದ್ದ ಎಣ್ಣೆ ಬಾಟಲಿಗಳನ್ನು ವಶಕ್ಕೆ ಪಡೆದು ಸ್ಪಾಟ್ ನಲ್ಲೇ ಕೇಸ್ ದಾಖಲಿಸಿಕೊಂಡ್ರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g