ಹಿರಿಯ ಸಹಕಾರಿ ಧುರೀಣ ಎಂ.ಬಿ ರುದ್ರೇಗೌಡ ಡೆಂಗ್ಯೂಗೆ ಬಲಿ
1 min read
ಹಿರಿಯ ಸಹಕಾರಿ ಧುರೀಣ ಮಳಲೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಬಿ ರುದ್ರೇಗೌಡ ಡೆಂಗ್ಯೂ ಗೆ ಬಲಿಯಾಗಿದ್ದಾರೆ ಕಳೆದ ರಾತ್ರಿ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿರುವ ಅವರು ಕೆ.ಆರ್ ಪೇಟೆ ಸುತ್ತಮುತ್ತ ಚಿರಪರಿಚಿತರಾಗಿದ್ದು ಸಮಾಜ ಸೇವೆ ಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು
ತಿಮ್ಮಪ್ಪಣ್ಣ ಎಂದೇ ಕರೆಯಲ್ಪಡುತ್ತಿದ್ದ ಗೌಡರು ಮಳಲೂರು ದೇವಸ್ಥಾನದ ಕಾರ್ಯದಲ್ಲಿ ಸಕ್ರಿಯರಾಗಿದ್ದರು
ಊರಿರಿನ ಮುಂದಾಳು ಎನಿಸಿಕೊಂಡಿದ್ದ ನಮ್ಮೂರಿನ ಹೆಮ್ಮೆ,ಗೌರವ ಯಾವುದೇ ವಿಚಾರವಿರಲಿ ನಮ್ಮೂರನ್ನು ಪ್ರತಿನಿಧಿಸುತ್ತಿದ್ದರು. ಮಳಲೂರಮ್ಮ ಜಾತ್ರಾ ಮಹೋತ್ಸವದ ಜವಾಬ್ದಾರಿ ತೆಗೆದುಕೊಂಡು ಅನೇಕ ವರ್ಷಗಳಿಂದ ಶ್ರಮಿಸುತ್ತಿದ್ದರು ದೇವರ ಕೆಲಸ, ಊರಿನ ಕೆಲಸದಲ್ಲಿ ಯಾವಾಗಲೂ ಮುಂದಾಳತ್ವ ವಹಿಸುತ್ತಿದ್ದರು. ಅವರ ಅಗಲಿಕೆ ಊರಿಗೆ ತುಂಬಲಾರದ ನಷ್ಟ ವಾಗಿದ್ದು ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಗ್ರಾಮದ ಹಿರಿಯರು ಕಂಬನಿ ಮಿಡಿದಿದ್ದಾರೆ. ಡೆಂಗ್ಯೂ ನಿಂದ ಮೃತಪಟ್ಟಿದ್ದು ಇತ್ತೀಚೆಗೆ ಕೆಆರ್ ಪೇಟೆ ಮಳಲೂರು ಸುತ್ತಮುತ್ತ ಮಾರಕ ಕಾಯಿಲೆಗೆ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚುತ್ತಿದೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g