ಜಿಲ್ಲಾಡಳಿತ ಆದೇಶಿಸಿದರೂ ರಜೆ ನೀಡದ ಖಾಸಗಿ ಶಾಲೆಗಳು : ವಿದ್ಯಾರ್ಥಿಗಳ ಅಸಮಾಧಾನ
1 min read
ಜಿಲ್ಲಾಡಳಿತ ರಜೆ ಪ್ರಕಟಿಸಿದರು ಕೆಲವು ಶಾಲೆಗಳು ಮಾತ್ರ ಇನ್ನೂ ರಜೆ ನೀಡಲು ಮೀನಾಮೇಷ ಎಣಿಸುತ್ತಿವೆ. ನಗರದ ಕೆಲವು ಖಾಸಗಿ ಹಾಗೂ ಅನುದಾನಿತ ಶಾಲೆಗಳು ರಜೆ ಕೊಟ್ಟಿಲ್ಲ, ತಮಗೆ ಇನ್ನೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಸುತ್ತೋಲೆ ಬಂದಿಲ್ಲ ಎಂಬ ಕಾರಣ ನೀಡಿ ವಿದ್ಯಾರ್ಥಿಗಳು ಶಾಲೆ ಬರುವಂತೆ ಹೇಳಿದ್ದಾರೆ
ನಗರದ ವಿದ್ಯಾ ಭಾರತಿ ಶಾಲೆ ತಮ್ಮ ಶಾಲೆಯ ಮಕ್ಕಳಿಗೆ ರಜೆ ಇಲ್ಲ ಎಂದು ಹೇಳಿದ್ದು ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದಂತೆ ವರ್ತಿಸುತ್ತಿದೆ. ರಜೆ ಎಂಬ ಸುದ್ದಿ ತಿಳಿಯುತ್ತಿದ್ದ ಖಚಿತ ಪಡಿಸಿಕೊಳ್ಳಲು ವಿಚಾರಿಸಿ ಪೋಷಕರು ಕರೆ ಮಾಡಿದರೆ ಶಾಲಾ ಆಡಳಿತ ಮಂಡಳಿ ಉದಾಸೀನವಾಗಿ ವರ್ತಿಸಿದ್ದಷ್ಟೆ ಅಲ್ಲದೇ ಕೆಲ ಪೋಷಕರ ಜೊತೆ ದುಂಡಾವರ್ತನೆ ತೋರಿದೆ. ಮಳೆ ಹೆಚ್ಚಿದ್ದು ಮಕ್ಕಳನ್ನು ಶಾಲೆಗೆ ಕರೆತರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ ಪೋಷಕರಿಗೆ ಉಡಾಫೆ ಉತ್ತರ ನೀಡಿದ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಹೇಗಾದರೂ ಬರಲೇಬೇಕು ಎಂದು ಹೇಳಿದ್ದಾರೆ. ಇದರಿಂದ ಕುಪಿತರಾದ ಕೆಲ ಪೋಷಕರು ಶಾಲೆಯ ಮುಖ್ಯಸ್ಥರನ್ನ ತರಾಟೆಗೆ ತೆಗೆದುಕೊಂಡು ಘಟನೆ ಕೂಡಾ ನಡೆದಿದೆ. ಒಟ್ಟಿನಲ್ಲಿ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಜಿಲ್ಲಾಡಳಿತವೇ ಆದೇಶಿಸಿದರು ಶಾಲಾ ಆಡಳಿತ ಮಂಡಳಿ ನಿರ್ಲಕ್ಷ ವಹಿಸಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿರುವುದು ವಿಪರ್ಯಾಸ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g