September 20, 2024

MALNAD TV

HEART OF COFFEE CITY

ಸಿ.ಟಿ ರವಿ ಭ್ರಷ್ಟಾಚಾರದ ಕೂಪದಿಂದ ಸಾವಿರಾರು ಕೋಟಿ ಹಣ ಮಾಡಿದ್ದಾರೆ : ದೇವರಾಜ್

1 min read

 

 

ಮುಡಾ ಹಗರಣ ಕುರಿತು ಸಿ.ಎಂ ಸಿದ್ದರಾಮಯ್ಯನವರಿಗೆ ಬಹಿರಂಗ ಪತ್ರ ಬರೆದಿರುವ ಎಂಎಲ್.ಸಿ ಸಿ.ಟಿ. ರವಿ ಚಿಕ್ಕಮಗಳೂರಲ್ಲಿ ಅಸ್ತಿತ್ವದಲ್ಲೇ ಇಲ್ಲದ ಆಂಜನೇಯ ಟ್ರಸ್ಟ್ ಹೆಸರಿನಲ್ಲಿ ತಮ್ಮ ಪತ್ನಿಗೆ 4 ಸೈಟ್ ಮಾಡಿಕೊಟ್ಡಿದ್ದು ಫ್ರಾಡ್ ಅಲ್ಲವೇ ಎಂದು ಕೆ.ಪಿ.ಸಿ.ಸಿ ವಕ್ತಾರ ಎಚ್ಎಚ್ ದೇವರಾಜ್ ಪ್ರಶ್ನೆ ಮಾಡಿದ್ದಾರೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ ಮಾಡಿ ಕಾಮಗಾರಿಗಳಲ್ಲಿ ಹಣ ಮಾಡಿ ಭ್ರಷ್ಟಕೂಪದಿಂದ ಸಾವಿರಾರು ಕೋಟಿ ಹಣ ಮಾಡಿದ್ದು ರವಿಯ ಎಲ್ಲಾ ಹಗರಣಗಳು ತನಿಖೆಯಾಗಲಿ ಎಂದು ಸವಾಲು ಹಾಕಿದ್ದಾರೆ. 

 

ಚಿಕ್ಕಮಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಆರೋಪ ಮಾಡಿದ ಎಚ್ ಎಚ್ ದೇವರಾಜ್ ಮುಡಾ ವಿಷಯ ಕುರಿತು ಸಿ.ಟಿ ರವಿ ಸರಿಯಾಗಿ ಅಧ್ಯಯನ ಮಾಡಿಲ್ಲ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನೈತಿಕತೆ ರವಿಗೆ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫ್ರಾಡ್ ಮಾಡಿ ಪತ್ನಿ ಪಲ್ಲವಿಗೆ ನಾಲ್ಕು ಸಿಎ ಸೈಟ್ ಗಳನ್ನು ಕೊಡಿಸಿದ್ದೀರಿ ಈ ಕುರಿತು ಬಹಿರಂಗ ಚರ್ಚೆಗೆ ಬನ್ನಿ ಬಿಜೆಪಿ ಮುಖಂಡರು ಮಾಡಿರುವ ಭ್ರಷ್ಟಾಚಾರದ ಬಗ್ಗೆ ಸೂಕ್ತ ವೇದಿಕೆಯಲ್ಲಿ ಹೇಳುತ್ತೇನೆ ಎಂದ ಅವರು ಸಿ.ಟಿ ರವಿ ಶಾಸಕ ಮಂತ್ರಿ ಆಗಿದ್ದ ಅವಧಿಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ನಾಗಮೋಹನ್ ದಾಸ್ ಸಮಿತಿ ಶೀಘ್ರದಲ್ಲೇ ಸಂಪೂರ್ಣ ವರದಿ ರಾಜ್ಯ ಸರ್ಕಾರಕ್ಕೆ ನೀಡಲಿದೆ ಎಂದು ದೇವರಾಜ್ ಹೇಳಿದ್ದಾರೆ.

 

ಆಂಜನೇಯ ಟ್ರಸ್ಟ್ ಸಿಎ ಸೈಟ್ ಕೇಸ್ ನಲ್ಲಿ ದೂರುದಾರ ನಂತರ ಸೆಟ್ಲಮೆಂಟ್ ಮಾಡಿಕೊಂಡಿದ್ದು ರಾಜಿ ಆಗಿದೆ. ಪ್ರಕರಣ ದಾಖಲಿಸಿದವರು ಒಳ ಒಪ್ಪಂದ ಮಾಡಿಕೊಂಡು ಇಂದು ದೋಸ್ತ್ ಗಳಾಗಿದ್ದಾರೆ. ಎಂದಿರುವ ದೇವರಾಜ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸರ್ಕಾರ ಪಿತೂರಿ ನಡೆಸಿದ್ದು ಕರ್ನಾಟಕ ರಾಜ್ಯಪಾಲ ಕೇಂದ್ರದ ಏಜೆಂಟ್ ರಂತೆ ವರ್ತಿಸುತ್ತಿದ್ದು ಕೂಡಲೇ ನೋಟೀಸ್ ವಾಪಸ್ ಪಡೆದು ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಕೆಡವಲು ಷಡ್ಯಂತ್ರ ನಡೆದಿದ್ದು ರಾಜ್ಯಾದ್ಯಂತ ಉಗ್ರ ಹೋರಾಟ ಮಾಡು ಇಲ್ಲವೇ ಮಡಿ ಜೈಲ್ ಬರೋ ನಡೆಸುವುದಾಗಿ ಎಚ್ ಎಚ್ ದೇವರಾಜ್ ಎಚ್ಚರಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!