ವರ್ಗಾವಣೆಗೊಂಡ ಶಿಕ್ಷಕ : ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಂದು ಕುಳಿತ ವಿದ್ಯಾರ್ಥಿಗಳು
ಮಲೆನಾಡಿನ ಕುಗ್ರಾಮಗಳ ಶಾಲೆಗಳ ಪರಿಸ್ಥಿತಿ ದಯನೀಯವಾಗಿದೆ. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಪಾಡು ಶಾಲಾ ಕಟ್ಟಡ ಗಳಷ್ಟೇ ಶೋಚನೀಯವಾಗಿದ್ದು ಚಿಕ್ಕಮಗಳೂರು ತಾಲೂಕಿನ ಮೇಲು ಹುಲುವತ್ತಿ ಗ್ರಾಮದ ಮಕ್ಕಳು ಶಿಕ್ಷಕರೇ ಇಲ್ಲದೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಂದು ಕುಳಿತಿದ್ದಾರೆ ಇದ್ದ ಒಬ್ಬ ಶಿಕ್ಷಕರು ವರ್ಗಾವಣೆಗೊಂಡಿದ್ದು ಯಾರನ್ನೂ ಇನ್ನೂ ನಿಯೋಜನೆ ಮಾಡಿಲ್ಲ.
ಟೀಚರ್ ಇಲ್ಲ ಅಂತ ಬಿಇಓ ಕಚೇರಿಗೆ ಬಂದ ಮಕ್ಕಳು ವಿದ್ಯಾರ್ಥಿಗಳು ಚಿಕ್ಕಮಗಳೂರು ತಾಲೂಕಿನ ಮೇಲು ಹುಲುವತ್ತಿ ಕಿರಿಯ ಪ್ರಾಥಮಿಕ ಶಾಲೆಯ 9 ಮಕ್ಕಳು ಬಂದು ಬಿಇಓ ಕಚೇರಿಯಲ್ಲಿ ಕೂತಿದ್ದಾರೆ. ಗ್ರಾಮದ ಶಾಲೆಯ 1 ರಿಂದ 5 ನೇ ತರಗತಿ ವರೆಗಿನ 9 ಜನ ಇರುವ ಮಕ್ಕಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಂದಿದ್ದಾರೆ. ಇದ್ದ ಒಬ್ಬರು ಟೀಚರ್ ಕೂಡ ವರ್ಗಾವಣೆ ಮಾಡಿಕೊಂಡು ಹೋಗಿದ್ದಾರೆ ಆ ಸ್ಥಳಕ್ಕೆ ಹೊಸಬರು ಬರೋದಕ್ಕೆ 15 ದಿನ ಆಗುತ್ತೆ ಎಂದು ಹೇಳಲಾಗಿದ್ದು, ಒಬ್ಬರೂ ಟೀಚರ್ ಇಲ್ಲದ ಕಾರಣ ಪೋಷಕರ ಜೊತೆ ಸೇರಿ ಬಿಇಓ ಕಚೇರಿಗೆ ಬಂದ ವಿದ್ಯಾರ್ಥಿಗಳು ಪ್ರತಿಭಟನಾರ್ಥಕ ವಾಗಿ ಆಗಮಿಸಿದ್ದಾರೆ. ಹೊಸಬರು ಬರುವ ಮುನ್ನವೇ ಹಳಬರನ್ನ ಹೇಗೆ ರಿಲೀವ್ ಮಾಡಿದ್ರು ಎಂದು ಪೋಷಕರ ಪ್ರಶ್ನೆ ಮಾಡುತ್ತಿದ್ದು, ಮುತ್ತೋಡಿ ಅರಣ್ಯ ವ್ಯಾಪ್ತಿಯ ಕುಗ್ರಾಮ ಮೇಲಿನ ಹುಲುವತ್ತಿ ಗ್ರಾಮವಾಗಿದೆ. ಚಿಕ್ಕಮಗಳೂರು ತಾಲೂಕಿನ ಕಾಡಂಚಿನ ಗ್ರಾಮಗಳ ಶಾಲೆಗಳ ಸ್ಥಿತಿಯಂತೆ ಅಲ್ಲಿನ ವಿದ್ಯಾರ್ಥಿಗಳ ಸ್ಥಿತಿಯೂ ಆಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g