ಆರ್.ಟಿ.ಓ ಕಚೇರಿಗೆ ಲೋಕಾಯುಕ್ತ ದಾಳಿ : ಪರಾರಿಯಾದ ದಲ್ಲಾಳಿಗಳು
1 min read
ದಲ್ಲಾಳಿಗಳ ಹಾವಳಿಯ ದೂರು ಬಂದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಆರ್.ಟಿ.ಓ ಕಚೇರಿಗೆ ಲೋಕಾಯುಕ್ತ ತಂಡ ದಿಢೀರ್ ದಾಳಿ ನಡೆಸಿದೆ. ಖಾಸಗಿ ವಾಹನದಲ್ಲಿ ಡಿವೈಎಸ್.ಪಿ ತಿರುಮಲೇಶ್ ನೇತೃತ್ವದಲ್ಲಿ ಆಗಮಿಸುತ್ತಿದ್ದಂತೆ ಎದ್ದೆನೋ ಬಿದ್ದಿನೋ ಎಂಬಂತೆ ದಲ್ಲಾಳಿಗಳು ಪರಾರಿಯಾಗಿದ್ದಾರೆ. ಕಚೇರಿಗೆ ತೆರಳಿದ ಲೋಕಾ ಸಿಬ್ಬಂದಿ ಕಡತಗಳ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಮಗಳೂರು RTO ಕಚೇರಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕಚೇರಿಗೆ ಖಾಸಗಿ ವಾಹನದಲ್ಲಿ ತೆರಳಿದ್ದಾರೆ. RTO ಕಚೇರಿಯಲ್ಲಿ ಲಂಚ ಹಾಗೂ ದಲ್ಲಾಳಿಗಳ ಕಾಟದ ದೂರು ಹಿನ್ನೆಲೆ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಸಾರ್ವಜನಿಕರ ದೂರಿನ ಮೇರೆಗೆ ಸ್ಥಳದಲ್ಲಿ ಜನರ ಅಹವಾಲು ಸ್ವೀಕರಿಸಲಾಯಿತು.
ಖಾಸಗಿ ವಾಹನದಲ್ಲಿ ಅಧಿಕಾರಿಗಳು ಬರುತ್ತಿದ್ದಂತೆ ದಲ್ಲಾಳಿಗಳು ಎಸ್ಕೇಪ್ ಆದ ಘಟನೆಯೂ ನಡೆದಿದೆ. ಈ ವೇಳೆ ಕಚೇರಿಯಲ್ಲಿ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದರು.
ಲೋಕಾಯುಕ್ತ ಅಧಿಕಾರಿಗಳು ಬರುತ್ತಿದ್ದಂತೆ ಕಕ್ಕಾಬಿಕ್ಕಿಯಾದ ಆರ್ ಟಿ ಓ ಸಿಬ್ಬಂದಿ ಗಾಬರಿಯಾಗಿ ಎದ್ದು ನಿಂತರು. ಮಿತಿಮೀರಿದ ಲಂಚದ ಹಾವಳಿಗೆ ಪದೇ ಪದೇ ಸುದ್ದಿಯಾಗುವ ಚಿಕ್ಕಮಗಳೂರು RTO ಕಚೇರಿ ಇಂದು ತಂಡಾ ಹೊಡೆದಿತ್ತು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g