ಬ್ರೇಕ್ ನ ನಂತರ ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಕಾಣಿಸಿಕೊಂಡ ಒಂಟಿ ಸಲಗ
1 min read
ಬ್ರೇಕ್ ನ ನಂತರ ಚಾರ್ಮಾಡಿ ಘಾಟಿಯಲ್ಲಿ ಮತ್ತೊಮ್ಮೆ ಒಂಟಿ ಸಲಗ ತನ್ನ ದರ್ಶನ ನೀಡಿದೆ. ಮಳೆ ಕ್ಷೀಣಿಸಿ ರಸ್ತೆ ಸಂಚಾರ ಸುಗಮವಾಗಿ ಎಲ್ಲಾ ಸಹಜ ಸ್ಥಿತಿಗೆ ಬರುತ್ತಿದ್ದಂತೆ
ಕಳೆದ ರಾತ್ರಿ ಗಜರಾಜ ಘಾಟಿಯ ರಸ್ತೆಯಲ್ಲಿ ಕಾಣಿಸಿಕೊಂಡಿದ್ದಾನೆ. ಆತಂಕದ ನಡುವೆಯೂ ವಾಹನಗಳು ಎಂದಿನಂತೆ ಸಾಗಿವೆ.
ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ಒಂಟಿ ಸಲಗ ಪ್ರತ್ಯಕ್ಷವಾಗಿ ರಸ್ತೆಯಲ್ಲಿ ಬಿಂದಾಸ್ ಓಡಾಟ ನಡೆಸಿ ಗಂಟೆಗಳ ಕಾಲ ರಸ್ತೆ ಬದಿ ಒಂಟಿ ಸಲಗ ನಿಂತಲ್ಲೇ ನಿಂತಿದೆ.
ಕತ್ತಲಲ್ಲಿ ಒಂಟಿ ಸಲಗ ಕಂಡು ಪ್ರಯಾಣಿಕರು ಆತಂಕಗೊಂಡಿದ್ದಾರೆ
ವಾಹನಗಳ ಸಮೀಪವೇ ಸಲಗದ ಓಡಾಟ ಇದ್ದರೂ ಯಾವುದೇ ಅನಾಹುತ ಸಂಭವಿಸಿಲ್ಲ, ಯಾರಿಗೂ ತೊಂದರೆ ಕೊಡದೆ ಓಡಾಡ್ತಿದ್ದ ಕಾಡಾನೆ ಕಂಡು ಕೆಲವರು ವಿಡಿಯೋ ಮಾಡಿದ್ದಾರೆ. ಕಾಡಾನೆ ಕಂಡು ನಿಲ್ಲಿಸಿ ನಿಧಾನವಾಗಿ ವಾಹನಗಳು ಸಾಗಿವೆ.
ಘಾಟ್ ನ ತಿರುವಿನಲ್ಲಿ ರಾತ್ರಿ ಕಾಣಿಸಿಕೊಂಡ ಒಂಟಿಸಲಗ ಸವಾರರಲ್ಲಿ ಭೀತಿ ಮೂಡಿಸಿದೆ.
ಕಳೆದ ಮೂರ್ನಾಲ್ಕು ತಿಂಗಳಿಂದಲೂ ಕಾಣಿಸಿಕೊಳ್ತಿರೋ ಒಂಟಿ ಸಲಗ ಮತ್ತೆ ಮತ್ತೆ ಪ್ರತ್ಯಕ್ಷವಾಗುತ್ತಿದೆ.
ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕದ ಚಾರ್ಮಾಡಿ ಘಾಟ್ ಆಗಾಗ್ಗೆ ಸಲಗದ ದರ್ಶನದ ಸ್ಪಾಟ್ ಆಗುತ್ತಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g