ಗಣಪತಿ ವಿಸರ್ಜನೆ ವೇಳೆ ಕುಣಿಯುವ ವಿಚಾರಕ್ಕೆ ಗಲಾಟೆ ಗುಂಪಿನ ಮಧ್ಯೆ ಕುಣಿಯುವಾಗ ತಳ್ಳಿದ್ದಕ್ಕೆ ಬ್ಲೇಡ್ ನಿಂದ ಹಲ್ಲೆ
1 min readಚಿಕ್ಕಮಗಳೂರು ನಗರದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು . ಹಿಂದೂ ಮಹಾಸಭಾ ಗಣಪತಿ ಆಯೋಜಕರ ನಿರೀಕ್ಷೆಗೂ ಮೀರಿ ಸಾವಿರಾರು ಜನ ಪಾಲ್ಗೊಂಡು ಮೆರವಣಿಗೆ ಅತ್ಯಂತ ವಿಜ್ರಂಭಣೆಯಿಂದ ನಡೆಸಲಾಯಿತು. ಆಜಾದ್ ಪಾರ್ಕ್ ಸರ್ಕಲ್ ದಾಟಿ ಕೋಟೆ ಕೆರೆಯಲ್ಲಿ ವಿಸರ್ಜನೆಗೊಳಿಸಲಾಯಿತು . ಯುವ ಸಮೂಹ ನಿರಂತರ 8 ಗಂಟೆಗಳ ಕಾಲ ಡಿಜೆ ಹಾಗೂ ಡ್ರಮ್ ಸೆಟ್ ಸೌಂಡ್ ಗೆ ಮನಸ್ಸೊ ಇಚ್ಛೆ ಕುಣಿದು ಕುಪ್ಪಳಿಸಿದರು. ಸುಮಾರು ಒಂದು ಸಾವಿರಕ್ಕೂ ಅಧಿಕ ಪೊಲೀಸರ ಸರ್ಪಗಾವಲಿನಲ್ಲಿ ಹಿಂದೂ ಮಹಾ ಸಭಾ ಗಣಪತಿ ಮೆರವಣಿಗೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ಒಂದೆಡೆ ಶಾಂತಿಯುತವಾಗಿ ಮುಕ್ತಾಯಗೊಂಡರೆ ಇನ್ನೊಂದೆಡೆ ಕುಣಿಯುವ ವಿಚಾರವಾಗಿ ಗಲಾಟೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ನಗರದ ಗವನಗಳ್ಳಿಯಲ್ಲಿ ನಡೆದಿದೆ.ಗುಂಪಿನ ಮಧ್ಯೆ ಕುಣಿಯುವಾಗ ತಳ್ಳಿದ್ದಕ್ಕೆ ಬ್ಲೇಡ್ ನಿಂದ ಹಲ್ಲೆ ಮಾಡಿ ಯುವಕನ ಮುಖದ ಮೇಲೆ ಬ್ಲೇಡ್ ನಿಂದ ಮನಸ್ಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ನಡೆದಿದೆ
23 ವರ್ಷದ ಗೌತಮ್ ಎಂಬಾತನ ಮೇಲೆ ಬ್ಲೇಡ್ ನಿಂದ
ತಿಮ್ಮರಾಜ್ ಅರಸ್ ಎಂಬ ಯುವಕ ಹಲ್ಲೆ ಮಾಡಿದ್ದು
ಗೌತಮ್ ಕಿವಿ ಕಟ್ ಆಗಿದ್ದು ಕೆನ್ನೆಯಿಂದ ಕುತ್ತಿಗೆವರೆಗೂ ಗಂಭೀರ ಗಾಯಗಳಾಗಿದ್ದು ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೂ ಜೀವಕ್ಕೆ ಕುತ್ತು ಬರುವ ಸಂಭವ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ ಗಾಯಾಳು ಗೌತಮ್ ನನ್ನ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನಗೆ ರವಾನಿಸಲಾಗಿದೆ. ಘಟನೆ ಕುರಿತು ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g