ಕಿರು ಸಾಲ ಸ್ಯಾಂಕ್ಷನ್ಗೆ ಲಂಚ, 10 ಸಾವಿರ ಲಂಚ ಪಡೆಯುವಾಗ ಎಸ್.ಡಿ.ಎ. ಲೋಕ ಬಲೆಗೆ
1 min readಸಮಾಜ ಕಲ್ಯಾಣ ಇಲಾಖೆಯ ನೇರ ಸಾಲವನ್ನ (ಕಿರುಸಾಲ) ಸ್ಯಾಂಕ್ಷನ್ ಮಾಡಲು 10 ಸಾವಿರ ಲಂಚ ಪಡೆಯುವಾಗ ಲೋಕಯುಕ್ತ ಪೊಲೀಸರು ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಚಿಕ್ಕಮಗಳೂರು ನಗರದ ಸಮಾಜ ಕಲ್ಯಾಣ ಇಲಾಖೆ ಎಸ್.ಡಿ.ಎ. ಕಾಂತರಾಜ್ ಲೋಕಾಯುಕ್ತ ಬಲೆಗೆ ಬಿದ್ದ ಎಸ್.ಡಿ.ಎ. ಮೂಡಿಗೆರೆ ತಾಲೂಕಿನ ಬಾಳೂರು ಮೂಲದ ಹಿಂದುಳಿದ ವರ್ಗದ ವ್ಯಕ್ತಿಯೊಬ್ಬರಿಗೆ ಸಮಾಜ ಕಲ್ಯಾಣ ಇಲಾಖೆಯ ಕಿರುಸಾಲ ಯೋಜನೆಯಡಿ ಸರ್ಕಾರ ನೀಡುವ ಒಂದು ಲಕ್ಷ ಲೋನ್ ಹಣವನ್ನ ಸ್ಯಾಂಕ್ಷನ್ ಮಾಡಲು ಎಸ್.ಡಿ.ಎ. ಕಾಂತರಾಜ್ ಒಂದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಒಂದು ಲಕ್ಷ ಹಣದಲ್ಲಿ 50 ಸಾವಿರ ಹಣ ಸಬ್ಸಿಡಿ, ಉಳಿದ 50 ಸಾವಿರ ಹಣ ಲೋನ್ ಮೂಲಕ ಮತ್ತೆ ಕಟ್ಟಬೇಕು. ಈ ಹಣವನ್ನ ಸ್ಯಾಂಕ್ಷನ್ ಮಾಡಲು ಹತ್ತು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಸಮಾಜ ಕಲ್ಯಾಣ ಇಲಾಖೆಯಲ್ಲಿ 10 ಸಾವಿರ ಹಣವನ್ನ ಪಡೆಯುವಾಗ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡಾಗಿ ಸೀಜ್ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ನಂದಿನ ಸೂಚನೆ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್, ಇನ್ಸ್ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದಲ್ಲಿ ದಾಳಿ ಮಾಡಿದ್ದು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g