ಜಿಲ್ಲೆಯಾದ್ಯಂತ ಇನ್ನೂ ಎರಡು ದಿನ ಮಳೆ ಸಾಧ್ಯತೆ
1 min read
ಜಿಲ್ಲೆಯ ಹಲವೆಡೆ ಇಂದೂ ಕೂಡ ವರುಣನ ಸುರಿಯುವಿಕೆ ಮುಂದುವರೆದಿದೆ. ಇದರಿಂದಾಗಿ ಕೆಲವೆಡೆ ಅವಘಡಗಳು ಸಹಾ ಸಂಭವಿಸಿವೆ. ವಾಯುಭಾರ ಕುಸಿತ ಉಂಟಾಗಿ ಜಿಟಿ ಜಿಟಿ ಮಳೆ ಬೀಳುತ್ತಿದ್ದು ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ತುಸು ಹೆಚ್ಚಿದೆ.
ಭಾರೀ ಮಳೆಯ ಪರಿಣಾಮ ಮನೆ ಮುಂದೆಯೇ ಭೂಕುಸಿತ ಉಂಟಾಗಿದೆ. ಭೂಮಿ ಕುಸಿತದಿಂದ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮದಲ್ಲಿ ಘಟನೆ ನಡೆದಿದ್ದು, ಲೀಲಾ ಎಂಬ ಅಂಗವಿಕಲೆಗೆ ಸೇರಿದ ಮನೆ ಗೋಡೆ ಬಿರುಕು ಬಿಟ್ಟಿದೆ, ಪತಿ ಸಾವನ್ನಪ್ಪಿದ ಬಳಿಕ ಏಕಾಂಗಿಯಾಗಿ ಬದುಕ್ತಿದ್ದ ಅಂಗವಿಕಲ ಮಹಿಳೆ ಲೀಲಾಗೆ ಆಸರೆಯಾಗಿ ಇದ್ದದ್ದು ಈ ಮನೆ ಒಂದೇ, ಆದರೆ ಮನೆ ಬಿದ್ದು 2 ದಿನವಾದರೂ ಸ್ಥಳಕ್ಕೆ ಯಾವುದೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿಲ್ಲ .
ಮತ್ತಷ್ಟು ಧರೆ ಕುಸಿದರೆ ಇಡೀ ಮನೆಯೇ ಬಿದ್ದುಹೋಗೋ ಸಾಧ್ಯತೆ ಇದ್ದು ಇದೇ ರೀತಿ ಮಳೆ ಮುಂದುವರೆದರೆ ಅನಾಹುತ ಕಟ್ಟಿಟ್ಟ ಬುತ್ತಿಯಾಗಿದೆ. ಈ ನಡುವೆ
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಎನ್ ಆರ್ ಪುರ ತಾಲೂಕುಗಳಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g