ಪತ್ರಿಕೆ ವಿತರಕರಿಗೂ ಹಾಗೂ ಕೇಬಲ್ ಆಪರೇಟರ್ಗಳಿಗೂ ಲಸಿಕೆ ನೀಡಲು ಒತ್ತಾಯ
1 min readಪತ್ರಿಕೆ ವಿತರಕರಿಗೂ ಹಾಗೂ ಕೇಬಲ್ ಆಪರೇಟರ್ಗಳಿಗೂ ಲಸಿಕೆ ನೀಡಲು ಒತ್ತಾಯ
ಪತ್ರಿಕೆ ವಿತರಕರಿಗೂ ಹಾಗೂ ಕೇಬಲ್ ಆಪರೇಟರ್ಗಳಿಗೂ ಕೊರೋನಾ ವಾರಿರ್ಸ್ ಎಂದು ಪರಿಗಣಿಸಿ ಕೋವಿಡ್ ಲಸಿಕೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ಪತ್ರಕತ್ರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರುರವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮನವಿ ಪತ್ರ ನೀಡಿದ್ದಾರೆ.
ಸಂಘದ ಮನವೀಯ ಮೇರೆಗೆ ಪತ್ರಕರ್ತರನ್ನು ಫ್ರಂಟ್ ಲೈನ್ ವಾರಿರ್ಸ್ ಎಂದು ಪರಿಗಣಿಸಿ ಕರ್ನಾಟಕ ರಾಜ್ಯಾಧ್ಯಂತ ಪತ್ರಕರ್ತರಿಗೆ ಲಸಿಕೆ ನೀಡಲು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಹಾಗೂ ಅಭಿನಂದನೀಯ. ಹಾಗೆಯೇ ಈ ಸೌಲಭ್ಯವನ್ನು ಪತ್ರಕರ್ತರ ಕುಟುಂಬದವರಿಗೂ ವಿಸ್ತರಿಸಬೇಕು ಅಲ್ಲದೆ ಮಳೆ, ಗಾಳಿ, ಬಿಸಿಲ್ಲೆನ್ನದೆ ಸದಾ ಪತ್ರಿಕೆಗಳ ವಿತರಣಾ ಕಾಯಕದಲ್ಲಿ ತೊಡಗಿರುವ ಎಲ್ಲಾ ಪತ್ರಿಕಾ ವಿತರಕರಿಗೂ ಹಾಗೂ ಕೇಬಲ್ ಆಪರೇಟರ್ಗಳಿಗೂ ಕೋವಿಡ್ ವಾರಿರ್ಸ್ ಎಂದು ಪರಿಗಣಿಸಿ ಲಸಿಕೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g