October 18, 2024

MALNAD TV

HEART OF COFFEE CITY

ನೂತನ ವಿಶ್ವಧರ್ಮ ಪೀಠ ಮಠ ಲೋಕಾರ್ಪಣೆ

1 min read

ಚಿಕ್ಕಮಗಳೂರು : ಜಯಬಸವ ತಪೋವನದ ವಿಶ್ವಧರ್ಮ ಪೀಠದ ಲೋಕಾರ್ಪಣೆ ಸಮಾರಂಭ ಹಾಗೂ ಬಸವತತ್ತ÷್ವ ಸಮಾವೇಶವು ಅಂಬಳೆ ರಸ್ತೆಯ ಉಂಡಾಡಿ ಹಳ್ಳಿ ಸಮೀಪದಲ್ಲಿ ನಿರ್ಮಿಸಿರುವ ನೂತನ ವಿಶ್ವಧರ್ಮ ಪೀಠ ಮಠದ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಡಾ|| ಗುರುಬಸವ ಸ್ವಾಮಿಗಳವರು ಉದ್ಘಾಟಿಸಿ ಮಾತನಾಡಿದ ಅವರು, ಸಮಸ್ಯೆಗಳು ಸ್ವಾಮೀಜಿಗಳನ್ನು ಬಿಟ್ಟಿಲ್ಲ, ಬರುವ ಸಮಸ್ಯೆಗಳಿಗೆ ಎದರದೆ ಸಮರ್ಥವಾಗಿ ಎದುರಿಸಿ ಜಯಿಸಬೇಕು. ಆ ಕೆಲಸವನ್ನು ಡಾ|| ಜಯಬಸವಾನಂದ ಸ್ವಾಮಿಗಳವರು ಮಾಡುತ್ತಿದ್ದು, ಇನ್ನೂ ಮಾಸಿಕ ವಿಶೇಷ ಪೂಜೆಗಳೊಂದಿಗೆ ಮಠವು ಭಕ್ತರ ಕೇಂದ್ರವಾಗಲಿ ಎಂದು ಹೇಳಿದರು.

ಇದೇ ವೇಳೆ ಮಲ್ನಾಡ್ ಟಿವಿಯೊಂದಿಗೆ ಮಾತನಾಡಿದ ಡಾ|| ಜಯಬಸವಾನಂದ ಸ್ವಾಮಿಗಳು ಒಣದು ವರ್ಷಗಳ ಪರಿಶ್ರಮದ ಫಲವಾಗಿ ಇಂದು ಧರ್ಮ ಗೆದ್ದಿದ್ದು, ಶ್ರೀ ಮಠಕ್ಕೆ ಸಿದ್ದಗಂಗಾ ಮಠದ ಡಾ|| ಸಿದ್ದಲಿಂಗ ಮಹಾಸ್ವಾಮಿಗಳವರು ಬಂದು ಪುನಿತಗೊಳಿಸಿದ್ದು, ಭಕ್ತಾದಿಗಳು ಉತ್ತಮ ರೀತಿಯಲ್ಲಿ ಸ್ಪಂಧಿಸುತ್ತಿದ್ದಾರೆ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!