ನೂತನ ವಿಶ್ವಧರ್ಮ ಪೀಠ ಮಠ ಲೋಕಾರ್ಪಣೆ
1 min readಚಿಕ್ಕಮಗಳೂರು : ಜಯಬಸವ ತಪೋವನದ ವಿಶ್ವಧರ್ಮ ಪೀಠದ ಲೋಕಾರ್ಪಣೆ ಸಮಾರಂಭ ಹಾಗೂ ಬಸವತತ್ತ÷್ವ ಸಮಾವೇಶವು ಅಂಬಳೆ ರಸ್ತೆಯ ಉಂಡಾಡಿ ಹಳ್ಳಿ ಸಮೀಪದಲ್ಲಿ ನಿರ್ಮಿಸಿರುವ ನೂತನ ವಿಶ್ವಧರ್ಮ ಪೀಠ ಮಠದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಡಾ|| ಗುರುಬಸವ ಸ್ವಾಮಿಗಳವರು ಉದ್ಘಾಟಿಸಿ ಮಾತನಾಡಿದ ಅವರು, ಸಮಸ್ಯೆಗಳು ಸ್ವಾಮೀಜಿಗಳನ್ನು ಬಿಟ್ಟಿಲ್ಲ, ಬರುವ ಸಮಸ್ಯೆಗಳಿಗೆ ಎದರದೆ ಸಮರ್ಥವಾಗಿ ಎದುರಿಸಿ ಜಯಿಸಬೇಕು. ಆ ಕೆಲಸವನ್ನು ಡಾ|| ಜಯಬಸವಾನಂದ ಸ್ವಾಮಿಗಳವರು ಮಾಡುತ್ತಿದ್ದು, ಇನ್ನೂ ಮಾಸಿಕ ವಿಶೇಷ ಪೂಜೆಗಳೊಂದಿಗೆ ಮಠವು ಭಕ್ತರ ಕೇಂದ್ರವಾಗಲಿ ಎಂದು ಹೇಳಿದರು.
ಇದೇ ವೇಳೆ ಮಲ್ನಾಡ್ ಟಿವಿಯೊಂದಿಗೆ ಮಾತನಾಡಿದ ಡಾ|| ಜಯಬಸವಾನಂದ ಸ್ವಾಮಿಗಳು ಒಣದು ವರ್ಷಗಳ ಪರಿಶ್ರಮದ ಫಲವಾಗಿ ಇಂದು ಧರ್ಮ ಗೆದ್ದಿದ್ದು, ಶ್ರೀ ಮಠಕ್ಕೆ ಸಿದ್ದಗಂಗಾ ಮಠದ ಡಾ|| ಸಿದ್ದಲಿಂಗ ಮಹಾಸ್ವಾಮಿಗಳವರು ಬಂದು ಪುನಿತಗೊಳಿಸಿದ್ದು, ಭಕ್ತಾದಿಗಳು ಉತ್ತಮ ರೀತಿಯಲ್ಲಿ ಸ್ಪಂಧಿಸುತ್ತಿದ್ದಾರೆ ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g