ಹಾವು ಕಚ್ಚಿದರೂ ಮುಳ್ಳು ಚುಚ್ಚಿದೆ ಎಂದು ನಿರ್ಲಕ್ಷಿಸಿದ್ದ ವ್ಯಕ್ತಿ ಸಾವು
1 min read
ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಹಾವು ಕಚ್ಚಿದರೂ ಮುಳ್ಳು ಚುಚ್ಚಿದೆ ಎಂದು ನಿರ್ಲಕ್ಷ ವಹಿಸಿದ ವ್ಯಕ್ತಿ ಮಲಗಿದ್ದ ಹಾಸಿಗೆಯಲ್ಲೇ ಮೃತಪಟ್ಟ ಘಟನೆ ತರೀಕೆರೆ ತಾಲ್ಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ. ಕಳೆದ ರಾತ್ರಿ ಮಲಗಿದ್ದ ಗಂಗಪ್ಪ ಅಸುನೀಗಿದ ನಂತರ ವೈದ್ಯರ ಬಳಿ ಇಂದು ತೆಗೆದುಕೊಂಡು ಹೋದ ವೇಳೆ ಹಾವು ಕಚ್ಚಿರುವುದು ದೃಢ ಪಟ್ಟಿದೆ.
ಹಾವು ಕಚ್ಚಿದ್ರು ಮುಳ್ಳು ಚುಚ್ಚಿದೆ ಎಂದು ಸುಮ್ಮನಿದ್ದ ವ್ಯಕ್ತಿ ಮಲಗಿದ್ದಲ್ಲೆ ಸಾವನ್ನಪ್ಪಿದ್ದಾರೆ ಮುಳ್ಳು ಚುಚ್ಚಿದೆ ಎಂದು ಊಟ ಮಾಡಿ ಮಲಗಿದ್ದ ವ್ಯಕ್ತಿ ಹಾಸಿಗೆಯಲ್ಲೆ ಸಾವು ಕಂಡಿದ್ದಾನೆ. ಮನೆಯವರು ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತರೀಕೆರೆ ತಾಲೂಕು ಕರಕುಚ್ಚಿ ಗ್ರಾಮದಲ್ಲಿ ಇಂತಹ ವಿಚಿತ್ರ ಘಟನೆ ನಡೆದಿದೆ. ಕರಕುಚ್ಚಿ ಗ್ರಾಮದ ಗಂಗಪ್ಪ (48) ಮೃತ ದುರ್ದೈವಿ ಆಗಿದ್ದಾರೆ. ಮುಳ್ಳು ಚುಚ್ಚಿದೆ, ಏನೂ ಆಗಲ್ಲ ಎಂದು ನಿರ್ಲಕ್ಷಿಸಿದ್ದ ವ್ಯಕ್ತಿ
ಜಮೀನಿನಲ್ಲಿ ಕೆಲಸ ಮಾಡುವಾಗ ಎರಡು ಬಾರಿ ಹಾವು ಕಚ್ಚಿರುವುದು ಗೊತ್ತಾಗಲೇ ಇಲ್ಲ, ಹಾವು ಕಚ್ಚಿದ್ದು ತಿಳಿಯದೇ ಮನೆಗೆ ಬಂದು ಮಲಗಿದ್ದ ಗಂಗಪ್ಪ ಹಾಸಿಗೆಯಲ್ಲೇ ಅಂತ್ಯ ಕಂಡಿದ್ದಾರೆ. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g