September 8, 2024

MALNAD TV

HEART OF COFFEE CITY

ಅಮೃತ್ ಯೋಜನೆ ಯುಜಿಡಿ ಓರ್ವ ಇಂಜಿನಿಯರ್ ಸಸ್ಪೆಂಡ್ ಮತ್ತೋಬ್ರು ಟ್ರಾನ್ಸ್‌ಫರ್

1 min read

 

 

ಚಿಕ್ಕಮಗಳೂರು ನಗರದಕ್ಕೆ ದಶಕಗಳಿಂದ ಇನ್ನೂ ಬಾರದ ಅಮೃತ್ ಯೋಜನೆ ನೀರು, ನಗರದ ಯುಜಿಡಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಇಬ್ಬರು ಅಧಿಕಾರಿಗಳ ಮೇಲೆ ಕ್ರಮ ಜರುಗಿದೆ. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡು ಒಬ್ಬರನ್ನು ಅಮಾನತುಗೊಳಿಸಿ ಮತ್ತೊಬ್ಬರನ್ನು ವರ್ಗಾವಣೆಗೊಳಿಸಲು ಸೂಚನೆ ನೀಡಿದರು. ಇಷ್ಟು ದಿನ ಇಲ್ಲಸಲ್ಲದ ಸಬೂಬು ಹೇಳುತ್ತಿದ್ದ ಕರ್ನಾಟಕ ಒಳ ಚರಂಡಿ ಕಾಮಗಾರಿ ಹಾಗೂ ಕುಡಿಯುವ ನೀರಿನ ಅಮೃತ್ ಯೋಜನೆ ಜಾರಿ ಬಗ್ಗೆ ಗಂಭೀರ ಕ್ರಮಕ್ಕೆ ಮುಂದಾಗಿರುವ ನಗರಾಭಿವೃದ್ಧಿ ಇಲಾಖೆ ಇಂದು ಇಬ್ಬರು ಇಂಜಿನಿಯರ್ ಗಳಿಗೆ ತಕ್ಕ ಪಾಠ ಕಲಿಸಿದೆ. ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ಇಂಜಿನಿಯರ್ ಗಳ ಗರಂ ಆದರು. ಯೋಜನೆಯ ಅಸಿಸ್ಟೆಂಟ್ ಇಂಜಿನಿಯರ್ ರನ್ನು ಸ್ಥಳದಲ್ಲಿ ಅಮಾನತು ಮಾಡಲು ಸೂಚನೆ ನೀಡಿದರು. ಮತ್ತೋರ್ವ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ಅವರನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಲು ಸೂಚಿಸಿದರು. 

ಸ್ವಾರಸ್ಯ ಎಂದರೆ ಇದೇ ಚರ್ಚೆ ನಡೆಯುವ ವೇಳೆ ಆಗಮಿಸಿದ ಎಇ ಎಲ್ಲಿದ್ರಿ ಇಷ್ಟೊತ್ತು ಎಂದರೆ ಹೊರಗಿದ್ದೆ ಎನ್ನುತ್ತಿದ್ದಂತೆ ಸಿಟ್ಟಾದ ಸಚಿವ ಭೈರತಿ ಸುರೇಶ ಹೊರಗೆ ಇದ್ದು ಬಿಡಿ ಎಂದರು, ಎಇಇ ಅವರನ್ನು ಗುಲ್ಬರ್ಗಾ ಜಿಲ್ಲೆಗೆ ವರ್ಗಾವಣೆ ಮಾಡಿ ಎಂದು ಹೇಳಿ ನೀವೇನು ತಮಾಷೆ ಮಾಡುತ್ತಿದ್ದೀರಾ ಕೋಟಿ ಕೋಟಿ ಹಣ ಇದ್ದರೂ ಕೆಲಸ ಮಾಡಲು ಏನು ಸಮಸ್ಯೆ ಎಂದು ರೇಗಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!