ಭಾರೀ ವಾಹನಗಳ ನಿಷೇಧ ಹಿಂಪಡೆಯುವಂತೆ ಡಿ.ಸಿಗೆ ಮನವಿ
1 min readಮಳೆ ಹೆಚ್ಚಿರುವ ಹಿನ್ನೆಲೆಯಲ್ಲಿ ಶೃಂಗೇರಿ ತಾಲೂಕಿನ ತನಿಕೋಡು ಎಸ್.ಕೆ ಬಾರ್ಡರ್ ಮೂಲಕ ಕಾರ್ಕಳ ಮಾರ್ಗದಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸುರುವ ಜಿಲ್ಲಾಡಳಿತ ತಮ್ಮ ಆದೇಶ ಮರು ಪರಿಶೀಲನೆ ಮಾಡುವಂತೆ ಲಾರಿ ಮಾಲೀಕರು ಹಾಗೂ ಚಾಲಕರ ಸಂಘ ಡಿ.ಸಿಗೆ ಮನವಿ ಸಲ್ಲಿಸಿದೆ.
ಕಟ್ಟಡ ನಿರ್ಮಾಣ ಕೆಲಸಗಳಿಗೆ ಸರಬರಾಜು ಮಾಡುವ ವಸ್ತುಗಳ ಸಾಗಾಣೆ ಮಾಡಲು ಈ ಮಾರ್ಗದಲ್ಲಿ ಸಂಚರಿಸುವುದು ಅನಿವಾರ್ಯ ಅಲ್ಲದೇ ಇದನ್ನೇ ನಂಬಿ ಸಾವಿರಾರು ಜನ ಲಾರಿ ಮಾಲೀಕರು ಚಾಲಕರು ಹಮಾಲಿ ಕಾರ್ಮಿಕರು ಜೀವನ ನಡೆಸುತ್ತಿದ್ದು ಲಾರಿ ಸಂಚಾರ ನಿಷೇಧ ದಿಂದಾಗಿ ಬದುಕುವುದೇ ಕಷ್ಟವಾಗಿದೆ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ ಶೃಂಗೇರಿ, ಕೊಪ್ಪ, ಜಯಪುರ , ನರಸಿಂಹರಾಜಪುರ ಸೇರಿದಂತೆ ಹಲವು ಕಡೆ್ಎ ಕಾರ್ಕಳ ತಾಲೂಕಿನ ಮಾರ್ಗವಾಗಿಯೇ ಕಟ್ಟಡ ಸಾಮಗ್ರಿ ತರಬೇಕಿದೆ ನಿಷೇಧ ನಂತರ ಸೂಚಿಸಿರುವ ಬದಲಿ ಮಾರ್ಗದಿಂದ ಬಂದರೆ ಇಂಧನ ಬೆಲೆ ಹಾಗೂ ಸಾಗಣೆ ಖರ್ಚು ಹೆಚ್ಚಾಗಲಿದೆ ಎಂದು ಅಳಲು ತೋಡಿಕೊಂಡಿದ್ದಾರೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g