ಹೂವಾಡಿಗ ಸಮುದಾಯದಿಂದ ಶ್ರೀ ಗುರು ಹೂವಾಡಿಗ ಮಾದಯ್ಯನವರ ಜಯಂತಿ ಆಚರಣೆ
1 min read12ನೇ ಶತಮಾನದ ಶ್ರೀ ಗುರು ಹೂವಾಡಿಗ ಮಾದಯ್ಯನವರ ಜಯಂತಿಯನ್ನು ಅನಂತ ಹುಣ್ಣಿಮೆಯ ಪ್ರಯುಕ್ತ ಚಿಕ್ಕಮಗಳೂರು ನಗರದ ಹನುಮಂತಪ್ಪ ಸರ್ಕಲ್ ನಲ್ಲಿ ಇರುವ ಹೂವಿನ ಮಾರುಕಟ್ಟೆಯಲ್ಲಿ ಹೂವಾಡಿಗ ಸಮುದಾಯದ ರಾಜ್ಯಾಧ್ಯಕ್ಷರಾದ ಸಿಆರ್ ರಘು ಹಾಗೂ ಜಿಲ್ಲಾ ಅಧ್ಯಕ್ಷರಾದ ಆನಂದ್ ಸಮುದಾಯದ ಮುಖಂಡರೆಲ್ಲರೂ ಸೇರಿ ಜಯಂತೋತ್ಸವವನ್ನು ಹೂವಾಡಿಗ ಮಾದಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಜಯಂತೋತ್ಸವವನ್ನು ಆಚರಿಸಲಾಗಿತ್ತು
ಕಾರ್ಯಕ್ರಮದಲ್ಲಿ ಹೂವಾಡಿಗ ಸಮುದಾಯದ ರಾಜ್ಯಾಧ್ಯಕ್ಷರಾದ ಸಿಆರ್ ರಘು ಮಾತಾಡಿ ರಾಜ್ಯದಲ್ಲಿ ನಿಗಮ ಮಂಡಳಿ ಸ್ಥಾಪನೆಯಾಗಿದ್ದು ಇದುವರೆಗೂ ಸರ್ಕಾರವು ಇನ್ನೂ ಕೂಡ ನೇಮಕ ಮಾಡಿಲ್ಲ ಅಧ್ಯಕ್ಷರನ್ನು ನೇಮಕ ಮಾಡಿ ಸಮುದಾಯದ ಏಳಿಗೆಗೆ ಅವಕಾಶ ಮಾಡಿಕೊಡಬೇಕೆಂದು ಸರ್ಕಾರವನ್ನು ಒತ್ತಾಯಿದ್ದರು
ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಆನಂದ್ ಮಾತನಾಡಿ ಚಿಕ್ಕಮಗಳೂರು ನಗರದಲ್ಲಿ ಹೂವಿನ ಮಾರುಕಟ್ಟೆಗೆ ಮಾದಯ್ಯನವರ ಹೆಸರು ಇಡಬೇಕು ಹಾಗೂ ನಮ್ಮ ಸಮುದಾಯಕ್ಕೆ ಒಂದು ಸಮುದಾಯ ಭಾವನ ಅವಶ್ಯಕತೆ ಇದ್ದು ಶಾಸಕ ತಮ್ಮಯ್ಯನವರು ಈ ವಿಚಾರದ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕೆಂದು ಒತ್ತಾಯಿಸಿದರು
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಸಿಡಿ ವಿನಯ್, ಖಜಾಂಚಿ ಕುಮಾರಸ್ವಾಮಿ ಬಸವರಾಜ್, ಮಂಜುನಾಥ್, ನಿತಿನ್, ಯತೀಶ್, ಸಮುದಾಯದ ಹಿರಿಯರು, ಹಾಗೂ ಮಹಿಳೆಯರು ಉಪಸ್ಥಿತರಿದ್ದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g