September 8, 2024

MALNAD TV

HEART OF COFFEE CITY

ಮಳೆ ನಿಂತರೂ ನಿಲ್ಲದ ಅವಾಂತರ ಗಳು : ಆಳುವ ವರ್ಗಕ್ಕೆ ಹಿಡಿಶಾಪ

1 min read

 

 

ಮಲೆನಾಡಿನಲ್ಲಿ ಮಳೆ ಅಬ್ಬರ ಕಡಿಮೆ ಆದರೂ ಅವಾಂತರಗಳು ಕಡಿಮೆ ಆಗುತ್ತಿಲ್ಲ, ಇತ್ತ ಸೂರು ಕಳೆದು ಕೊಂಡವರನ್ನು ಕೇಳುವವರೇ ಇಲ್ಲ ಎಂಬಂತಾಗಿದ್ದು ಗಮನ ಹರಿಸದ ಆಳುವ ವರ್ಗಕ್ಕೆ ಬಡವರ ಹಿಡಿಶಾಪ ಮಾತ್ರ ತಪ್ಪಿದ್ದಲ್ಲ.

ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆಗಾಳಿ ಅಬ್ಬರ ಮುಂದುವರೆದಿದೆ
ಮಳೆಯಿಂದ‌ ಗ್ರಾಮೀಣ ಪ್ರದೇಶದಲ್ಲಿ ಮನೆಗಳು ಕುಸಿಯುತ್ತಿರುವ ಘಟನೆ ವರಿದಿಯಾಗುತ್ತಿವೆ.ಕಳಸ ತಾಲೂಕಿನ ಹಳುವಳ್ಳಿಯಲ್ಲಿ ಭಾರೀ ಗಾಳಿಮಳೆಗೆ ಮನೆ ಗೋಡೆ ಕುಸಿದು, ಮೇಲ್ಚಾವಣಿ ನೆಲಕ್ಕುರುಳಿ ದಿನ್ಯನಿತ್ಯ ಬಳಸುವ ಅಗತ್ಯವಸ್ತುಗಳು ಮಣ್ಣು ಪಾಲಾಗಿದೆ ಗ್ರಾಮದ ತಾರಿಕೊಂಡ ಉಮಾ ರಮೇಶ್ ಎಂಬುವರ ಮನೆ‌ ಕುಸಿತದಿಂದ ಕಂಗಾಲಾಗಿರುವ ಕುಟುಂಬ ನಿರಾಶ್ರಿತರಾಗಿದ್ದಾರೆ.
ಸೂರಿಲ್ಲದೆ ಕೊಟ್ಟಿಗೆಯಲ್ಲಿ ಸದ್ಯ ಈ ಕುಟುಂಬ ವಾಸಿಸುತ್ತಿದೆ. ಆದರೂ ಸ್ಥಳಕ್ಕೆ ಭೇಟಿ ನೀಡದೇ ಇರುವ ಅಧಿಕಾರಿಗಳು ಜನಪ್ರತಿನಿಧಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ಚಿಕ್ಕಮಗಳೂರು ‌ಜಿಲ್ಲೆಯ ಕಳಸ ತಾಲೂಕಿನಲ್ಲಿ ಮಳೆ ಅವಾಂತರಕ್ಕೆ ಹತ್ತಾರು ಮನೆಗಳು ಬಿದ್ದಿದ್ದು ಗಂಜಿ ಕೇಂದ್ರ ತೆರೆಯುವಂತೆ ಕೂಗು ಕೇಳಿ ಬಂದಿದೆ.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!