October 18, 2024

MALNAD TV

HEART OF COFFEE CITY

ಮತ್ತೆ ವಿಧಾನಸೌಧ ಪ್ರವೇಶಿಸಲಿದ್ದಾರೆ ಮಾಜಿ ಶಾಸಕ ಸಿ.ಟಿ ರವಿ

1 min read

 

ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಲೋಕಸಭೆ ಟಿಕೆಟ್, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಜವಾಬ್ದಾರಿ ಹೀಗೆ ಸಾಕಷ್ಟು ಬೇಡಿಕೆಗಳನ್ನಿಟ್ಟು ಸತತ ಪ್ರಯತ್ನದಲ್ಲಿದ್ದ ಮಾಜಿ ಶಾಸಕ ಸಿ.ಟಿ ರವಿಗೆ ಇದೀಗ ವಿಧಾನ ಪರಿಷತ್ ಪ್ರವೇಶಿಸುವ ಸುಯೋಗ ಒಲಿದು ಬಂದಿದೆ. ಶಾಸಕರಿಂದ ಆಯ್ಕೆಯಾಗುವ ಎಂಎಲ್.ಸಿ ಹುದ್ದೆಗೆ ಬಿಜೆಪಿ ಅಭ್ಯರ್ಥಿ ಎಂದು ಪಕ್ಷ ಘೋಷಣೆ ಮಾಡಿದೆ.

 

ಉಡುಪಿ-ಚಿಕ್ಕಮಗಳೂರು ಲೋಕಸಭೆ ಟಿಕೆಟ್ ಫೈಟ್, ಗೋ ಬ್ಯಾಕ್ ಶೋಭಾ ಕರಂದ್ಲಾಜೆ ನಂತರ ಪಕ್ಷದ ವರಿಷ್ಠರ ಮಾತಿಗೆ ನಿಷ್ಟೆ ತೋರಿದ ಚಿಕ್ಕಮಗಳೂರು ಮಾಜಿ ಶಾಸಕ ಸಿ.ಟಿ ರವಿಗೆ ಕೊನೆಗೂ ಎಂಎಲ್.ಸಿ ಭಾಗ್ಯ ದೊರೆತಿದೆ.‌ ತೀವ್ರ ಪೈಪೋಟಿ ನಡುವೆಯೂ ಜೂನ್ 13 ರಂದು ನಡೆಯಲಿರುವ ದೈವಾರ್ಷಿಕ ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕರೇ ಮತದಾನ ಮಾಡಿ ಆಯ್ಕೆ ಮಾಡುವ ಎಂಎಲ್.ಸಿ ಆಗಲಿದ್ದಾರೆ ಮಾಜಿ ಶಾಸಕ ಸಿ.ಟಿ ರವಿ.. ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ರವಿ ಹೆಸರನ್ನು ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರಕಟಿಸಿದೆ. ಮೂವರು ಬಿಜೆಪಿಗರ ಹೆಸರನ್ನು ಅಂತಿಮಗೊಳಿಸಲಾಗಿದ್ದು ಇವರಲ್ಲಿ ಹಾಲಿ ಸದಸ್ಯ
ಎನ್ ರವಿಕುಮಾರ್, ಎಂ. ಜಿ ಮುಳೆ ಜೊತೆಗೆ ಸಿ.ಟಿ ರವಿ ಹೆಸರು ಅಭ್ಯರ್ಥಿಗಳ ಪೈಕಿ ಕೇಳಿ ಬಂದಿದೆ. ನಾಳೆಯಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದ್ದು, ಹತ್ತೊಂಬತ್ತು ವರ್ಷ ವಿಧಾನಸೌಧದಲ್ಲಿ ಕೆಳಮನೆ ಪ್ರವೇಶಿಸಿದ್ದ ರವಿ ಇದೀಗ ಮೊದಲ ಬಾರಿಗೆ ಮೇಲ್ಮನೆಗೆ ಎಂಟ್ರಿ ಕೊಡಲು ಸಿದ್ದರಾಗಲಿದ್ದಾರೆ‌. ರೇಸ್ ನಲ್ಲಿ ಮಂಡ್ಯ ಮಾಜಿ ಸಂಸದೆ ಸುಮಲತಾ ರನ್ನು ಹಿಂದಿಕ್ಕಿ ಟಿಕೆಟ್ ಗಿಟ್ಟಿಸುವಲ್ಲಿ ರವಿ ಯಶಸ್ವಿಯಾಗಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಸೂಚನೆ ಇದ್ದ ವೇಳೆ ಪಕ್ಷದಲ್ಲೇ ಇದ್ದ ವಿರೋಧಿಗಳಿಗೆ ಎಂಎಲ್.ಸಿ ಆಗಿ ಬರುವುದಾಗಿ ಚಾಲೆಂಜ್ ಮಾಡಿದ್ದ ಸಿ.ಟಿ ರವಿ ಈ ಮೂಲಕ ಗೆದ್ದಿದ್ದಾರೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!