ಗಮನ ಸೆಳೆಯುತ್ತಿರುವ ಹಿಂದು-ಮುಸ್ಲಿಂ ಭಾವೈಕ್ಯತೆಯ ಗಣೇಶ ಪ್ರತಿಷ್ಟಾಪನೆ
1 min read
ಗಣೇಶ ಚತುರ್ಥಿ ಹಿಂದೂಗಳ ಹಬ್ಬ ಗಣಪತಿ ಹಬ್ಬದ ಆರಂಭಕ್ಕೂ ತಿಂಗಳ ಮುಂಚೆಯೇ ಯುವಕರು ಬೀದಿ-ಬೀದಿಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ಹಳ್ಳಿಹಳ್ಳಿಗಳಲ್ಲಿ ಗಣಪನನ್ನ ಪ್ರತಿಷ್ಟಾಪಿಸಲು ರೆಡಿ ಆಗುತ್ತಾರೆ. ಈ ನಡುವೆ ಅಲ್ಲಲ್ಲೇ ಧರ್ಮ ಮೀರಿದ ದೇವರ ನಂಬಿಕೆಯ ಕೆಲ ಮುಸ್ಲಿಮರು ಕೂಡ ಗಣಪತಿ ಆಚರಣೆಯಲ್ಲಿ ಕೈ ಜೋಡಿಸುತ್ತಾರೆ. ಜಿಲ್ಲೆಯ ಎನ್.ಆರ್.ಪುರ ಪಟ್ಟಣದಲ್ಲೊಬ್ಬ ಭಾವೈಕ್ಯತಾ ಗಣಪತಿ ಧರ್ಮಗಳ ಮೀರಿ ಧಾರ್ಮಿಕ ನಂಬಿಕೆಯನ್ನ ಹಂಚುತ್ತಿದ್ದಾನೆ. ಹಿಂದೂ-ಮುಸ್ಲಿಂ ಕ್ರಿಶ್ಚಿಯನ್ ಎಲ್ಲರೂ ಸೇರಿ ಗಣಪತಿ ಕೂರಿಸಿ ಸಂಭ್ರಮಿಸಿದ್ದಾರೆ. ಅಷ್ಟೆ ಅಲ್ಲದೆ ಈ ಗಣಪತಿ ಕಮಿಟಿಯ ಅಧ್ಯಕ್ಷೆಯೇ ಮುಸ್ಲಿಂ ಮಹಿಳೆ
ಜುಬೇದಾ ಆಗಿರುವುದು ವಿಶೇಷ. ಹಿಂದೂ ಮುಸ್ಲಿಮರ ಮಧ್ಯೆ ಆಗಾಗ್ಗೆ ಅನೇಕ ವಿಚಾರಕ್ಕೆ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಆದರೆ ಎನ್.ಆರ್.ಪುರ ತಾಲೂಕಿನ ರಾಜೀವ್ ನಗರದಲ್ಲಿ ಪ್ರತಿಷ್ಠಾಪನೆಯಾಗಿರೋ ಗಣೇಶ ಧರ್ಮ ಮೀರಿದ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾನೆ. ಕಳೆದ 14 ವರ್ಷಗಳಿಂದ ಇದೇ ಗ್ರಾಮದ ಮುಸ್ಲಿಂ ಮಹಿಳೆ ಜುಬೇದಾ ಗಣಪತಿ ಸೇವಾ ಸಮಿತಿ ಅಧ್ಯಕ್ಷರಾಗಿ ಹಿಂದೂ ಬಾಂಧವರೊಂದಿಗೆ ಸೇರಿ ಗಣೇಶೋತ್ಸವ ನಡೆಸಿಕೊಂಡು ಬರುತ್ತಿದ್ದಾರೆ. ಅದರಂತೆ ಈ ಬಾರಿಯೂ ಗಣೇಶನ ಮೂರ್ತಿಯನ್ನ ಪ್ರತಿಷ್ಠಾಪಿಸಿ ಹಿಂದೂ-ಕ್ರೈಸ್ತ-ಮುಸಲ್ಮಾನ ಮಕ್ಕಳನ್ನು ಒಂದೆಡೆ ಸೇರಿಸಿ ಭೇದ-ಭಾವ ತಾರತಮ್ಯವಿಲ್ಲದೇ ಮಕ್ಕಳಿಗೂ ಭಾವೈಕ್ಯತೆ ಸಂದೇಶವನ್ನು ಸಾರುತ್ತಿದ್ದಾರೆ. ಸಿದ್ಧಾಂತ ಇರೋದು ಧರ್ಮಕಷ್ಟೆ. ದೇವರಿಗಲ್ಲ. ಎಲ್ಲಾ ದೇವರು ಒಂದೇ ಎಂದು ಮಕ್ಕಳಿಗೂ ತಿಳಿ ಹೇಳುತ್ತಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g