September 8, 2024

MALNAD TV

HEART OF COFFEE CITY

ಕಾಫಿನಾಡಲ್ಲಿ ನಡೆದ ಹೃದಯ ವಿದ್ರಾವಕ ಘಟನೆ : ಸಾವಿನಲ್ಲೂ ಒಂದಾದ ಪತಿ ಪತ್ನಿಯರು

1 min read

ಚಿಕ್ಕಮಗಳೂರು : ಕೊರೋನ ಸೋಂಕಿನಿಂದ ಮಲೆನಾಡಲ್ಲಿ ಒಂದಿಲ್ಲೊಂದು ಕಹಿ ಘಟನೆಗಳು ನಡೆಯುತ್ತಿವೆ. ಈ ಕೊರೋನ ಸೋಂಕಿನಿಂದ ಕಾಫಿನಾಡಲ್ಲಿ ನಡೆಯಿತು ಮತ್ತೊಂದು ಮನಕಲಕುವ ಹೃದಯವಿದ್ರಾವಕ ಘಟನೆ ನಡೆದಿದೆ.

ಪತ್ನಿಗೆ ಕೋವಿಡ್ ಸೋಂಕು ತಗುಲಿದ ವಿಚಾರ ತಿಳಿಯುತ್ತಿದ್ದಂತೆ ಪತಿಯು ಕೂಡ ಹೃದಯಾಘಾತದಿಂದ ಸಾವಿನಪ್ಪಿದ್ರೆ, ಇತ್ತ ಚಿಕಿತ್ಸೆ ಫಲಕಾರಿಯಾಗದೆ ಪತ್ನಿಯು ಸಹ ಗಂಡನ ಹಾದಿ ಹಿಡಿದಿದ್ದಾರೆ. ಚಿಕ್ಕಮಗಳೂರು ನಗರದ ಅರವಿಂದ ನಗರದಲ್ಲಿ ವಾಸ ಮಾಡುತ್ತಿದ್ದ 60 ವರ್ಷದ ಜಯಮ್ಮ ಎನ್ನುವವರು ಚಿಕಿತ್ಸೆಗಾಗಿ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಜಯಮ್ಮನಿಗೆ ಕೊರೋನ ಸೋಂಕು ಇರುವುದು ತಿಳಿದು ಬಂದಿದೆ. ವಿಷಯ ತಿಳಿದ 68 ವರ್ಷದ ಪತಿ ನಿವೃತ್ತ ಎ.ಎಸ್.ಐ ಬಸವರಾಜ್ ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಇತ್ತ ಆಸ್ಪತ್ರೆಗೆ ದಾಖಲಾಗಿದ್ದ ಪತ್ನಿ ಜಯಮ್ಮರವರು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಈ ಮೂಲಕ ಸಾವಿನಲ್ಲೂ ದಂಪತಿಗಳಿಬ್ಬರು ಒಂದಾಗಿದ್ದಾರೆ. ತಂದೆ, ತಾಯಿಗಳಿಬ್ಬರ ಸಾವಿನಿಂದ ಮಕ್ಕಳಿಗೆ ಅಘಾತವಾಗಿದೆ. ಮೃತರರಿಬ್ಬರ ಅಂತ್ಯಸಂಸ್ಕಾರವನ್ನು ನಗರದ ಉಪ್ಪಳ್ಳಿಯ ಚಿತಾಗಾರದಲ್ಲಿ ಬಿಜೆಪಿ ತಂಡದವರು ನೆರವೇರಿಸಿದರು.

ಮನೆಯಲಿರಿ : ಸುರಕ್ಷಿತವಾಗಿರಿ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!