September 8, 2024

MALNAD TV

HEART OF COFFEE CITY

ನಿತ್ಯ ಯಮನ ಎಮ್ಮೆಯ ಮೇಲೆ ನಡಿಗೆಯಂತಾಗಿದೆ ಇವರ ಗೋಳು

1 min read

 

 

ಸರ್ಕಾರ ಜನರಿಗೆ ಒಳ್ಳೆದ್ ಮಾಡೋಕೆ ಕೆಲ್ಸ ಮಾಡುತ್ತೋ ದುಡ್ ಮಾಡೋಕೆ ಕೆಲ್ಸ ಮಾಡುತ್ತೋ ಗೊತ್ತಿಲ್ಲ, ಇಂಥಹಾ ಕೆಲಸಕ್ಕೆ ಏನ್ ಹೇಳ್ಬೇಕು ನೀವೇ ಹೇಳಿ, ಇದು ಹಣ ಕೊಡದ ಸರ್ಕಾರದ ತಪ್ಪೋ ಕೆಲಸ ಮಾಡದ ಅಧಿಕಾರಿಗಳ ತಪ್ಪೋ ಎಂಬಂತಾಗಿದೆ. ಮಲೆನಾಡಿಗರದ್ದು ನಿತ್ಯ ಯಮನ ಎಮ್ಮೆ ಮೇಲೆ ಸವಾರಿ ಮಾಡುವ ಬದುಕಾಗಿದೆ. ಕಬ್ಬಿಣದ ಸೇತುವೆ ಮಾಡಿದ ಅಧಿಕಾರಿಗಳು ಹಲಗೆ ಹಾಕೋದ್ನೆ ಮರೆತಿದ್ದಾರೆ 

ಮೂರು ವರ್ಷಗಳಿಂದ ಮಲೆನಾಡಿಗರದ್ದು ಇಲ್ಲಿ ನಿತ್ಯ ಸಾವಿನ ಜೀವನವಾಗಿದೆ. ಕಬ್ಬಿಣದ ರಾಡ್ ಗಳ ಮೇಲೆ‌ ಸಾವಿನ ನಡಿಗೆಯಲ್ಲಿ ಪ್ರತಿ ಒಂದೊಂದು ರಾಡಿಗೂ 2 ಅಡಿ ಗ್ಯಾಪ್ ಗಳಿವೆ. ಸೇತುವೆ ಕೆಳಗೆ ಕಲ್ಲು-ಬಂಡೆಗಳ ಜಲಪಾತವಿದ್ದು ಬಿದ್ರೆ ಖೇಲ್ ಖತಂ ಗ್ಯಾರೆಂಟಿ

 

ಹೌದು ಕೊಪ್ಪ ತಾಲೂಕಿನ ಅತ್ತಿಕೂಡಿಗೆ, ಅಬ್ಬಿಕಲ್ಲು ಗ್ರಾಮದ ಜನರ ಗೋಳು ಕೇಳೋರೇ ಇಲ್ಲದಂತಾಗಿದೆ. ಅದರ ನಡುವೆ ಪ್ರವಾಸಿಗರು ಈ ಅರ್ಧಂಬರ್ಧ ಸೇತುವೆ ಮೇಲೆ ಹೋಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು ಮತ್ತೊಂದು ದುರಂತ.. ನಾಳೆ ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರು.. ಸರ್ಕಾರವೇ ಎಂದು ಪ್ರಶ್ನೆ ಮೂಡುತ್ತಿದೆ. ಸರ್ಕಾರದ ವಿರುದ್ಧ ಹಳ್ಳಿಗರ ಆಕ್ರೋಶ ಅಸಮಾಧಾನ ತೀವ್ರಗೊಂಡಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕುವಂತಾಗಿದೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!