September 17, 2024

MALNAD TV

HEART OF COFFEE CITY

ಕಾಫಿನಾಡ ಮಲೆನಾಡ ಭಾಗದಲ್ಲಿ ನಿಲ್ಲದ ಕಾಡಾನೆ ಹಾವಳಿ, ಆನೆ ದಾಳಿಗೆ ವ್ಯಕ್ತಿ ಸಾವು

1 min read

 

ಕಾಫಿನಾಡ ಮಲೆನಾಡು ಭಾಗದಲ್ಲಿ ಕಾಡಾನೆ ದಾಳಿ ಮಿತಿ ಮೀರಿದ್ದು ಇಂದು ಕೂಡ ಓರ್ವ ವ್ಯಕ್ತಿ ಕಾಡಾನೆ ದಾಳಿಗೆ ಸಾವನ್ನಪ್ಪಿದ್ದಾನೆ. ಚಿಕ್ಕಮಗಳೂರು ತಾಲೂಕಿನ ದುರ್ಗಾ ಗ್ರಾಮದ 60 ವರ್ಷದ ಕಿನ್ನಿ ಮೃತ ದುರ್ದೈವಿ. ಇಂದು ಬೆಳಗ್ಗೆ ಕಾಫಿ ತೋಟದ ಕೆಲಸಕ್ಕೆಂದು ದುರ್ಗಾ ಗ್ರಾಮದಿಂದ ಕಾಲುದಾರಿಯಲ್ಲಿ ಅರೆನೂರು ಗ್ರಾಮಕ್ಕೆ ಬರುವ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಮೂರು ಕಾಡಾನೆಗಳ ಗುಂಪು ಏಕಾಏಕಿ ದಾಳಿ ಮಾಡಿ ತುಳಿದು ಸಾಯಿಸಿವೆ. ಕಾಡಾನೆಗಳ ಜೊತೆ ಮರಿ ಆನೆ ಇದ್ದು ಗಾಬರಿಗೊಂಡು ಆನೆಗಳು ದಾಳಿ ಮಾಡಿವೆ. ಕಿನ್ನಿಯನ್ನ ತುಳಿದು ಸಾಯಿಸಿದ ಕಾಡಾನೆಗಳ ಗುಂಪು ಸ್ಥಳದಲ್ಲೇ ಇವೆ. ಸ್ಥಳಕ್ಕೆ ಯಾರನ್ನೂ ಬಿಟ್ಟುಕೊಳ್ಳುತ್ತಿರಲ್ಲಿಲ್ಲ. ಸ್ಥಳಿಯರು ಕೂಗಾಡಿ, ಪಟಾಕಿ ಸಿಡಿಸಿ ಏನೇ ಮಾಡಿದರೂ ಆನೆಗಳು ಕದಲಿಲ್ಲ. ಬಳಿಕ ಸ್ಥಳಕ್ಕೆ ಬಂದ 30 ಜನ ಅರಣ್ಯಾಧಿಕಾರಿಗಳ ತಂಡ

 

 

ಹರಸಾಹಸಪಟ್ಟು ಆನೆಯ ಹಿಂಡನ್ನ ಚದುರಿಸಿದ್ದಾರೆ. ಬಳಿಕ ಮೃತದೇಹವನ್ನ ಅಲ್ಲಿಂದ ಕೊಂಡಿಯ್ದಿದ್ದಾರೆ. ಮೂಡಿಗೆರೆ ತಾಲೂಕಿನಲ್ಲಿ ಆನೆ ಹಾವಳಿ ಯತೇಚ್ಚವಾಗಿದೆ. ಕಳೆದ 20 ದಿನಗಳ ಹಿಂದೆ 16 ಕಾಡಾನೆಗಳ ಹಿಂಡು 2 ಮರಿ ಆನೆಗಳ ಜೊತೆ ಮೂಡಿಗೆರೆ ಗ್ರಾಮೀಣ ಭಾಗದಲ್ಲಿ ದಾಂದಲೆ ಮಾಡಿತ್ತು. ಈ ಆನೆಗಳ ಹಿಂಡು ಅದೇ ತಂಡ ಎಂದು ಸ್ಥಳಿಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೂಡಿಗೆರೆ ತಾಲೂಕಿನಲ್ಲಿ ಕಳೆದ 2 ವರ್ಷದಲ್ಲಿ 6ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಸ್ಥಳಿಯರು ಕೂಡಲೇ ಆನೆಗಳನ್ನ ಸ್ಥಳಾಂತರಿಸಬೇಕು, ಸಾವಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!