ವಿಶ್ವ ಹಿಂದೂ ಪರಿಷತ್ ನೂತನ ಕಾರ್ಯಾಲಯ ಲೋಕಾರ್ಪಣೆ : ರವಿಶಂಕರ ಗುರೂಜಿ ಭಾಗಿ
1 min readವಿಶ್ವ ಹಿಂದೂ ಪರಿಷದ್ ನ ನೂತನ ಕಾರ್ಯಾಲಯ ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿ ಇಂದು ಲೋಕಾರ್ಪಣೆಗೊಂಡಿತು. ಶ್ರೀ ರವಿಶಂಕರ್ ಗುರೂಜಿ ಕಟ್ಟಡದ ಲೋಕಾರ್ಪಣೆ ನೆರವೇರಿಸಿದರು ವಿಶ್ವ ಎಂದು ಪರಿಷದ್ ನ ಷಷ್ಠಿ ಪೂರ್ತಿ ಹಾಗೂ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಧರ್ಮಶ್ರೀ ಕಟ್ಟಡ ಇಂದು ಲೋಕಾರ್ಪಣೆ ಆಗಿದೆ. ವಿಶ್ವ ಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್.ಜಿ , ಆರ್.ಎಸ್.ಎಸ್ ಸಹ ಸರಕಾಯ೯ವಾಹ ದತ್ತಾತ್ರೇಯ ಹೊಸಬಾಳೆ ಎಂ.ಬಿ ಪುರಾಣಿಕ್, ವಿಜಯಲಕ್ಷ್ಮಿ ದೇಶಪಾಂಡೆ ಸೇರಿದಂತೆ ಸಂಘ ಪರಿವಾರದ ಪ್ರಮುಖರು ಲೋಕಾರ್ಪಣೆ
ವೇಳೆ ಹಾಜರಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಲೋಕಾರ್ಪಣೆ ನಂತರ ವಿಶ್ವ ಹಿಂದೂ ಪರಿಷತ್ ಕಾಯಾ೯ಲಯಕ್ಕೆ ಭೇಟಿ ನೀಡಿದರು. ಕಟ್ಟಡ ಸಂಪೂರ್ಣ ವೀಕ್ಷಣೆ ನಂತರ ಮಾತನಾಡಿದ ಅವರು ಧರ್ಮಶ್ರೀ ಲೋಕಾರ್ಪಣೆ ಎಲ್ಲರಿಗೂ ಸಂತೋಷ ತರುವ ವಿಷಯವಾಗಿದ್ದು, ಹಲವು ದಶಕಗಳಿಂದ ನಿರಂತರವಾಗಿ ಸಮಾಜಮುಖಿ ಕೆಲಸಗಳನ್ನೇ ಮಾಡುತ್ತಿರುವ ವಿ.ಎಚ್.ಪಿ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಮಹತ್ಕಾರ್ಯದಲ್ಲಿ ತೊಡಗಿದೆ ಎಂದರು. ಸಂಘದ ಚಟುವಟಿಕೆಗೆ ಇಂತಹ ವ್ಯವಸ್ಥಿತ ಭವನದ ಅವಶ್ಯಕತೆ ಇತ್ತು ಎಂದು ವಿಜಯೇಂದ್ರ ಇದೇ ವೇಳೆ ತಿಳಿಸಿದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g