September 17, 2024

MALNAD TV

HEART OF COFFEE CITY

ಇದು ಈದ್ ಮಿಲಾದ್ ಅಥವಾ ಟಿಪ್ಪು ಜಯಂತಿಯೋ..? ಸಿ ಟಿ ರವಿ

1 min read

 

ಚಿಕ್ಕಮಗಳೂರು : ಶಿವಮೊಗ್ಗದಲ್ಲಿ ನಡೆದ ಕೋಮು ಗಲಭೆ ದುರದೃಷ್ಟಕರ. ಇದು ಅಮಾಯಕರನ್ನು ಗುರಿಯಾಗಿಸಿ, ಗಲಭೆ ಹುಟ್ಟು ಹಾಕುವ ಉದ್ದೇಶ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಶಾಸಕ ಸಿ ಟಿ ರವಿ ಹೇಳಿದ್ದಾರೆ.ಈ ಗಲಭೆ ಪೂರ್ವಾ ನಿಯೋಜಿತ ಹಾಗೂ ಸ್ಪಷ್ಟವಾಗಿದೆ. ಹಿಂದುಗಳ ಮಾರಣ ಹೋಮ ನಡೆಸಿದ ವ್ಯಕ್ತಿಗಳ ಪ್ರತಿಕೃತಿ ನಿರ್ಮಾಣಕ್ಕೆ ಏಕೆ ಅವಕಾಶ ಕೊಟ್ರಿ. ಇಲ್ಲಿ ನಡೆದದ್ದು ಈದ್ ಮಿಲಾದೋ ಅಥವಾ ಟಿಪ್ಪು ಜಯಂತಿಯೋ.ಇಲ್ಲ ಔರಂಗ ಜೆಬ್ ಜಯಂತಿ ನಡೆಸಿದ್ರಾ ಎಂದರು.ಔರಂಗಜೇಬ್ ಹಾಗೂ ಟಿಪ್ಪು ಲಕ್ಷಾಂತರ ಹಿಂದುಗಳ ಮಾರಣ ಹೋಮ ನಡೆಸಿದವರು. ಅವರನ್ನು ವಿಜೃಂಭಿಸಲು ಏಕೆ ಬಿಟ್ರಿ. ಹಾಡು ಹಗಲೇ ಕೈಯಲ್ಲಿ ತಲವಾರ್ ಹಿಡಿದು ಬೆದರಿಸುವ ಕೆಲಸ ಮಾಡಿದ್ದಾರೆ. ಜೊತೆಗೆ ಕಲ್ಲು ತೂರಾಟ ನಡೆಸಿದ್ದಾರೆ.ಜಿಹಾದ್ ಪೋಷಣೆ ಮಾಡುವ ಬರವಣಿಗೆಗಳನ್ನು ಹಾಕಿದ್ದಾರೆ. ಈ ಎಲ್ಲವನ್ನು ತೆರವು ಗೊಳಿಸುವ ಕೆಲಸ ಜಿಲ್ಲಾಡಳಿತ ಮಾಡಬೇಕಿತ್ತು. ತೆರವು ಮಾಡದಿದ್ದ ಕಾರಣ, ಗಲಭೆ ನಡೆದಿರುವುದು ಸ್ಪಷ್ಟವಾಗಿದೆ.ಈ ಮೂಲಕ ಮತ್ತೊಂದು ಪಾಕಿಸ್ತಾನ ಮಾಡುವ ಸಂಚು ನಡೆಯುತ್ತಿದೆ ಎಂದ ಅವರುಇಂತಹ ಕೋಮು ಶಕ್ತಿಗಳನ್ನ ರಾಜಕೀಯ ದಾಳಕ್ಕೆ ಬಳಕೆ ಮಾಡಿ,ಮತ್ತೊಂದು ವಿಭಜನೆ ಮಾಡುವ ಭಯ ನಮ್ಮನ್ನು ಕಾಡುತ್ತಿದೆ.ದೇಶ ವಿರೋಧಿ ಕೋಮು ಶಕ್ತಿಗಳ ವಿರುದ್ಧ ನಾವೆಲ್ಲ ಒಂದಾಗಿ ನಿಲ್ಲಬೇಕಿದೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!