September 19, 2024

MALNAD TV

HEART OF COFFEE CITY

ಕುಡಿದ ಮತ್ತಿನಲ್ಲಿ ಯುವಕರಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಮೇಲೆ ಹಲ್ಲೆ

1 min read

ಚಿಕ್ಕಮಗಳೂರು : ಎಣ್ಣೆ ಕುಡಿದು ಟೈಟಾಗಿದ್ದ ಯುವಕರಿಂದ ಸುಖಾಸುಮ್ಮನೆ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ಮೇಲೆ ಅವ್ಯಾಚ್ಯವಾಗಿ ಬೈದು ದೈಹಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೀರೂರು ಸಮೀಪದ ‌ಹೋರಿತಿಮ್ಮನಹಳ್ಳಿ ಗೇಟ್ ಬಳಿ ನಡೆದಿದೆ.

ಸಾರ್ವಜನಿಕರ ಸಾರಿಗೆ ಸೇವೆಗೆಂದೆ ಇರುವ ಸರ್ಕಾರಿ ಬಸ್ಸಿನ ಮೇಲೆ ಮಧ್ಯದ ಬಾಟಲಿ ಎಸೆದು ದರ್ಪ ತೋರಿಸಿದ್ದಾರೆ, ಕಡೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಬಸ್ಸಿನ ಮೇಲೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಜನ ಯುವಕರು ಎಣ್ಣೆ ಕುಡಿದು ಗುಂಗಿನಲ್ಲಿ ಎಣ್ಣೆಯ ಗಾಜಿನ ಬಾಟಲಿ ಎಸೆದಿದ್ದಾರೆ. ಎಣ್ಣೆಯ ಗಾಜಿನ ಬಾಟಲಿಯು ಬಸ್ಸಿನ ಮುಂಭಾಗದ ಗ್ಲಾಸ್ ಗೆ ತಗುಲಿ, ಸರ್ಕಾರಿ ಬಸ್ಸಿನ ಮುಂಭಾಗದ ಗ್ಲಾಸ್ ಪುಡಿ, ಪುಡಿಯಾಗಿದೆ. ನಾಲ್ಕು ಜನ ಯುವಕರ ಅನಾಗರೀಕ ಕೆಲಸದ ಬಗ್ಗೆ ಕಡೂರು KSRTC ವಿಭಾಗದ ಚಾಲಕ ಸತೀಶ್ ಪ್ರಶ್ನಿಸಿದ್ದಾರೆ. ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿದ  ಕಿರಣ್, ಸತೀಶ್, ಸಚಿನ್, ಸುಪ್ರೀತ್ ಸೇರಿದಂತೆ ನಾಲ್ಕು ಜನ ಯುವಕರು ಪ್ರಶ್ನಿಸಿದ ಚಾಲಕನಿಗೆ ಅವ್ಯಾಚ್ಯವಾಗಿ ಬೈಯ್ದು, ಹಿಗ್ಗಾಮುಗ್ಗಾ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಯುವಕರ ದುರ್ವರ್ತನೆಯಿಂದ ಬಸ್ಸಿನ ಪ್ರಯಾಣಿಕರು ಹಾಗೂ ಸ್ಥಳಿಯರು ಬಸ್ಸ್ ಚಾಲಕನನ್ನು ಯುವಕರಿಂದ ಬಿಡಿಸಿ, ಯುವಕರಿಗೆ ಬುದ್ದಿ ಹೇಳಿದ್ದಾರೆ. ಹಲ್ಲೆಗೊಳಗಾದ ಡ್ರೈವರ್ ಸತೀಶ್ ನನ್ನು ಬೀರೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಹಲ್ಲೆ ನಡೆಸಿದ ನಾಲ್ವರ ಮೇಲೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕುಡಿದ ಮತ್ತಿನಲ್ಲಿ ಹಲ್ಲೆ ಮಾಡಿದ  ಕಿರಣ್, ಸತೀಶ್, ಸಚಿನ್, ಸುಪ್ರೀತ್ ಬಂಧಿಸಿದ್ದಾರೆ.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!