September 17, 2024

MALNAD TV

HEART OF COFFEE CITY

ಮನೆ ಮುಂದೆ ಕಟ್ಟಿದ್ದ ಕರುವನ್ನ ಕೊಂದ ಚಿರತೆ, ಸ್ಥಳಿಯರಲ್ಲಿ ಆತಂಕ

1 min read

 

ಚಿಕ್ಕಮಗಳೂರು : ಗ್ರಾಮದ ಒಳಗಡೆಯೇ ಬಂದು ಮನೆ ಮುಂದೆ ಕಟ್ಟಿ ಹಾಕಿದ್ದ ಕರುವನ್ನು ಚಿರತೆ ಕೊಂದಿರುವಂತಹ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ನಡೆದಿದೆ. ಪಂಚನಹಳ್ಳಿ ಕಡೂರು ತಾಲೂಕಿನ ಹೋಬಳಿ ಕೇಂದ್ರ. ಹೋಬಳಿ ಕೇಂದ್ರದ ನಗರದೊಳಕ್ಕೆ ಚಿರತೆ ಬಂದಿರುವುದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬಂದಿರುವ ಚಿರತೆ ಮನೆ ಮುಂದೆ ಕಟ್ಟಿ ಹಾಕಿದ್ದ ಕರುವಿನ ರಕ್ತ ಕುಡಿದು ಕೊಂದಿದೆ. ಕೊಂದ ಬಳಿಕ ಕರುವನ್ನಎಳೆದೊಯ್ಯಲು ಪ್ರಯತ್ನಿಸಿದೆ. ಆದರೆ, ಕರುವನ್ನ ಹಗ್ಗದಲ್ಲಿ ಕಟ್ಟಿ ಹಾಕಿದ್ದ ಪರಿಣಾಮ ಎಳೆಯಲು ಸಾಧ್ಯವಾಗಿಲ್ಲ. ನಾಯಿಗಳು ಬೊಗುಳುತ್ತಿದ್ದದ್ದನ್ನ ಗಮನಿಸಿ ಮನೆಯವರು ನೋಡಿ ಕೂಗಿದ ಕೂಡಲೇ ಚಿರತೆ ಕರುವನ್ನ ಬಿಟ್ಟು ಓಡಿಹೋಗಿದೆ. ಕಳೆದೊಂದು ವಾರದ ಹಿಂದೆಯೂ ಪೆಟ್ರೋಲ್ ಬಂಕ್ ಬಳಿ ಚಿರತೆಯನ್ನು ಸ್ಥಳೀಯರು ಗಮನಿಸಿದ್ದರು. ಇದೀಗ ಕರುವನ್ನ ಕೊಂದಿರುವುದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಅರಣ್ಯ ಇಲಾಖೆ ಕೂಡಲೇ ಚಿರತೆಯನ್ನ ಸೆರೆ ಹಿಡಿಯಬೇಕೆಂದು ಆಗ್ರಹಿಸಿದ್ದಾರೆ. ಶಿವಕುಮಾರ್ ಎಂಬುವರಿಗೆ ಸೇರಿದ ಒಂದು ವರ್ಷದ ಕರು ಚಿರತೆಗೆ ಬಲಿಯಾಗಿದೆ. ಚಿರತೆಯನ್ನು ನೋಡಿರುವ ಸ್ಥಳೀಯರು ವಯಸ್ಸಾಗಿರುವ ಚಿರತೆ. ಅದರ ಬಾಲವೇ ಕಾಲಿನ ಗಾತ್ರ ಇತ್ತು ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!