ಹಿಂದು ಮಹಾಗಣಪತಿ ವೇದಿಕೆಯಲ್ಲಿ ಸಾಮೂಹಿಕ ಗೌರಿ ಪೂಜೆ ಮಡಿಲಕ್ಕಿ ಸಮರ್ಪಣೆ
1 min read
ನಗರ ಹಿಂದು ಮಹಾ ಗಣಪತಿ ಸೇವಾ ಸಂಘದ ವತಿಯಿಂದ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ನಾಲ್ಕನೇ ದಿನವಾದ ಇಂದು ಸಂಜೆ ಮಹಿಳೆಯರಿಗೆ ಸಾಮೂಹಿಕ ಗೌರಿ ಪೂಜೆ ಹಾಗೂ ಮಡಿಲಕ್ಕಿ ಸಮರ್ಪಣೆಯನ್ನು ಆಯೋಜನೆ ಮಾಡಲಾಗಿದೆ ಎಂದು ಹಿಂದು ಮಹಾಗಣಪತಿ ಸೇವಾ ಸಂಘದ ಕಮಿಟಿಯವರು ತಿಳಿಸಿದ್ದಾರೆ. ಜೊತೆಗೆ ಜ್ಯೂನಿಯರ್ ಏಸುದಾಸ್ ಎಂದೇ ಖ್ಯಾತಿಯಾಗಿರುವ ಸಾಯಿ ಸತೀಶ್ ರವರಿಂದ ಭಕ್ತಿ ಭಾವ ಸಂಗಮ ಸಂಗೀತ ಕಾರ್ಯಕ್ರಮ ಸಹಾ ಇರಲಿದೆ.
ಚಿಕ್ಕಮಗಳೂರು ನಗರ ಪ್ರತಿಷ್ಟಿತ ಗಣಪತಿಗಳಲ್ಲಿ ಒಂದಾದ ಹಿಂದೂ ಮಹಾಗಣಪತಿಯ 11ನೇ ವರ್ಷದ ಗಣೇಶೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಇಂದು ಸಂಜೆ 5:30 ಮಾತೆಯರಿಗೆ ಸಾಮೂಹಿಕ ಗೌರಿ ಪೂಜೆ ಹಾಗೂ ಮಡಿಲಕ್ಕಿ ಸಮರ್ಪಣೆ ಕಾರ್ಯಕ್ರಮವನ್ನು ನಗರ ಓಂಕಾರೇಶ್ವರ ದೇವಾಲಯದ ಆವರಣದಲ್ಲಿ ಇರುವ ಹಿಂದೂ ಮಹಾಗಣಪತಿ ಆವರಣ ನಡೆಸಲಾಗುತ್ತಿದೆ ಈ ಕಾರ್ಯಕ್ರಮ ಮಹಿಳೆಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಧಾರ್ಮಿಕ ಕಾರ್ಯದಲ್ಲಿ ಯಶಸ್ವಿ ಗೊಳಿಸಬೇಕೆಂದು ಸಮಿತಿವತಿಯಿಂದ ಮನವಿ ಮಾಡಿದ್ದಾರೆ. ನಂತರ ಇದೇ ವೇದಿಕೆಯಲ್ಲಿ ಭಕ್ತಿ ಭಾವ ಸಂಗಮ ಕಾರ್ಯಕ್ರಮ ಸಾಯಿ ಸತೀಶ್ ನಡೆಸಿಕೊಡಲಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g