October 18, 2024

MALNAD TV

HEART OF COFFEE CITY

ಒಂದೇ ಒಂದು ಸೆಕೆಂಡ್ ಗ್ರೇಟ್ ಎಸ್ಕೇಪ್ : ಮಳೆಗೆ ಮತ್ತಷ್ಟು ಅವಘಡ

1 min read

ಜಸ್ಟ್…. ಒಂದೇ ಒಂದು ಸೆಕೆಂಡ್…ಒಂದೇ ಒಂದು ಅಡಿ… ಗ್ರೇಟ್ ಎಸ್ಕೇಪ್ !!!!!!!!!! 

ಈ ಸುದ್ದಿ ಬದುಕಿನಲ್ಲಿ ಪ್ರತಿ ಒಂದು ಸೆಕೆಂಡ್ ನ ಮಹತ್ವವನ್ನ ಸಾರಿ…ಸಾರಿ… ಹೇಳುತ್ತೆ, ,,,, 

 

ಕಾಫಿನಾಡಿನಲ್ಲಿ ಇಬ್ಬರ ಜೀವ ಗ್ರೇಟ್ ಎಸ್ಕೇಪ್ ಆಗಿರುವ ವಿಷಯ ಇದು 

ಪವಾಡ ಸದೃಶ ರೀತಿಯಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು ಹೇಗೆಂಬುದೇ ರಣ ರೋಚಕ ಕಹಾನಿ

 

ಹೌದು ನಿರಂತರ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದು ಕಾರಿನ ಬಾನೆಟ್ ಮೇಲೆ ಬಿದ್ದಿದ್ರಿಂದ ಇಬ್ಬರು ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಒಂದೇ ಒಂದು ಸೆಕೆಂಡ್ ಲೇಟಾಗಿದ್ರು ಇಬ್ಬರು ಸಾವನ್ನಪ್ಪುವ ಸಾಧ್ಯತೆ ಇತ್ತು. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ದೇವದಾನ ಎಸ್ಟೇಟ್ ಬಳಿ ಈ ಘಟನೆ ನಡೆದಿದೆ. ದೇವರ ದಯೆಯಿಂದ ಕಾರಿನಲ್ಲಿದ್ದ ಇಬ್ಬರು ಜಸ್ಟ್ ಮಿಸ್ ಆಗಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟಕ್ಕೆ ಜನರು ತತ್ತರಗೊಂಡಿದ್ದು ಘಟನೆಯಲ್ಲಿ ಕೂದಲೆಳೆ ಅಂತರದಲ್ಲಿ ಕಾರಿನಲ್ಲಿದ್ದವರು ಪಾರಾಗಿದ್ದಾರೆ. ಬಾಳೆಹೊನ್ನೂರು ಬಳಿಯ ಭದ್ರಾ ಸ್ಟಾಪ್ ಕಾಫಿ ಶಾಪ್ ನ ಬಳಿ ಸಮೀಪಿಸುತ್ತಿದ್ದಂತೆ ಏಕಾಏಕಿ ಮರ ಬಿದ್ದಿದ್ದು ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಓಡೋಡಿ ಬಂದ ಸ್ಥಳೀಯರು ಮರ ತೆರವುಗೊಳಿಸಲು ಸಹಕರಿಸಿದ್ದಾರೆ. ಘಟನೆಯಿಂದಾಗಿ ಚಿಕ್ಕಮಗಳೂರು, ಶೃಂಗೇರಿ ಹೆದ್ದಾರಿ ಕೆಲ ಕಾಲ ಬಂದ್ ಆಗಿತ್ತು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!