ಸುಳ್ಳು ಹೇಳಿ ತಗಲಾಕಿಕೊಂಡ ಶೃಂಗೇರಿ ತಹಶಿಲ್ದಾರ್ ಗೌರಮ್ಮ
1 min read
ರಾಜೇಂದ್ರ ಕುಮಾರ್ ಕಟಾರಿಯಾ ಎದುರು ಸುಳ್ಳು ಹೇಳಿ ವರ್ಗಾವಣೆ ಗೊಂಡಿರುವ ಶೃಂಗೇರಿ ತಹಶಿಲ್ದಾರ್ ಗೌರಮ್ಮ ತಗಲಾಕಿಕೊಂಡ ಘಟನೆ ಉಸ್ತುವಾರಿ ಕಾರ್ಯದರ್ಶಿ ದಿಢೀರ್ ಭೇಟಿ ವೇಳೆ ನಡೆದಿದೆ.
ಸುಳ್ಳು ಹೇಳಿ ಶೃಂಗೇರಿ ತಹಶೀಲ್ದಾರ್ ತಗಲಾಕಿಕೊಂಡಿದ್ದಾರೆ. ಕಂಪ್ಯೂಟರ್ ಹಾಗೂ ಸ್ಕ್ಯಾನರ್ ಕಚೇರಿಯ ಒಳಗೆ ಇವೆ ಇಂದು ಸುಳ್ಳು ಹೇಳಿದ್ದಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಟಾರಿಯಾ ತರಾಟೆಗೆ ತೆಗೆದುಕೊಂಡಿದ್ದಾರೆ. ಶೃಂಗೇರಿ ತಹಶೀಲ್ದಾರ್ ಕಚೇರಿಯಲ್ಲಿ ಘಟನೆ ನಡೆದಿದ್ದು, ರಾಜೇಂದ್ರ ಕುಮಾರ್ ಕಟಾರಿಯ ದಿಢೀರ್ ಭೇಟಿ ವೇಳೆ ಸ್ಕ್ಯಾನರ್ ಮತ್ತು ಕಂಪ್ಯೂಟರ್ ಎಲ್ಲಿವೆ ಎಂದು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಸರ್ಕಾರಿ ಕಚೇರಿಯಲ್ಲಿ ಸರಿಯಾದ ನಿರ್ವಹಣೆ ಇಲ್ಲದಿದ್ದಕ್ಕೆ ಅವರು ಬೇಸರ ವ್ಯಕ್ತಪಡಿಸಿದರು.
ಮೊದಲಿಗೆ ಕಚೇರಿಯ ಒಳಗೆ ಇವೆ ಎಂದು ತಹಶೀಲ್ದಾರ್ ಗೌರಮ್ಮ ಸುಳ್ಳು ಹೇಳುತ್ತಿದ್ದಂತೆ ತಹಶೀಲ್ದಾರ್ ಗೆ ಕಟಾರಿಯಾ ಕ್ಲಾಸ್ ತೆಗೆದುಕೊಂಡ್ರ
ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಗೌರಮ್ಮ ನಿಜ ಒಪ್ಪಿಕೊಂಡರು.
ಕಾರ್ಯನಿಮಿತ್ತ ಚಿಕ್ಕಮಗಳೂರಿಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿ ಗೌರಮ್ಮ ಶೃಂಗೇರಿಯಿಂದ ವರ್ಗಾವಣೆಗೊಂಡಿರುವುದಾಗಿ ತಿಳಿಸಿದರು. ಬಾಕಿ ಇರುವ ಕೆಲಸ ಮುಗಿಯುವವರೆಗೂ ವರ್ಗಾವಣೆ ಇಲ್ಲ ಎಂದು ಕಡಕ್ ಆಗಿ ಕಟಾರಿಯಾ ಹೇಳಿ ಎಲ್ಲಾ ಕೆಲಸಗಳನ್ನು ಬೇಗನೇ ಮುಗಿಸಿ ಎಂದು ವಾರ್ನಿಂಗ್ ಕೊಟ್ಟರು. ಶೃಂಗೇರಿ ತಹಶೀಲ್ದಾರ್ ಕಚೇರಿಗೆ ದಿಡೀರ್ ಭೇಟಿ ನೀಡಿ ಖುದ್ದು ಪರಿಶೀಲನೆ ವೇಳೆ ಕಚೇರಿಯ ಸಿಬ್ಬಂದಿಗಳು ಕಕ್ಕಾಬಿಕ್ಕಿಯಾದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g