ಬೈಕಿಗೆ ಪ್ಯಾಲೇಸ್ತೇನ್ ಧ್ವಜ ಕಟ್ಟಿ ಓಡಾಟ ಪ್ರಕರಣ : ನಗರ ಠಾಣೆಯಲ್ಲಿ ಆರು ಮಂದಿ ವಿರುದ್ದ ಪ್ರಕರಣ ದಾಖಲು
1 min readಈದ್ ಮಿಲಾದ್ ಹಬ್ಬದ ಹಿನ್ನಲೆ ಚಿಕ್ಕಮಗಳೂರು ನಗರದಲ್ಲಿ ಬೈಕಿಗೆ ಪ್ಯಾಲೇಸ್ತೇನ್ ಧ್ವಜ ಬೈಕ್ ಗೆ ಕಟ್ಟಿ ಓಡಾಟ ನಡೆಸುತ್ತಿದ್ದು ಈ ಕುರಿತು ಚಿಕ್ಕಮಗಳೂರು ನಗರ ಠಾಣೆಯಲ್ಲಿ ಆರು ಮಂದಿ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ ಪ್ರಕರಣ ಕುರಿತು ಆರೋಪಿಗಳ ಮೇಲೆ ಬಿ.ಎನ್.ಎಸ್. 196 (1), 61(2)b ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಹಾಗೂ ಅಪ್ರಾಪ್ತ ಬಾಲಕರು ಬೈಕ್ ನಲ್ಲಿ ಪ್ಯಾಲೇಸ್ತೇನ್ ಧ್ವಜ ಕಟ್ಟಿ ನಗರದ ಕಡೂರು ರಸ್ತೆಯಲ್ಲಿ ಓಡಾಡಿದ್ದರು ಈ ಕುರಿತು ಪೊಲೀಸರು ಧ್ವಜ ಹಾಗೂ ಬೈಕ್ ಗಳನ್ನ ವಶಕ್ಕೆ ಪಡೆದಿದ್ದಾರೆ ಹಾಗೂ ಪ್ರಕರಣ ಕುರಿತು ಹಲವು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಪ್ರಕರಣ ಕುರಿತು ಹಿಂದೂ ಪರ ಸಂಘಟನೆಗಳು ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ
ಇಂದು ಈದ್ ಮಿಲಾದ್ ಹಬ್ಬದ ಹಿನ್ನೆಲೆ ಚಿಕ್ಕಮಗಳೂರು ನಗರದಲ್ಲಿ ಮಧ್ಯಾಹ್ನ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಯುಲಿದ್ದು ಖಾಕಿ ಹೈ ಅಲರ್ಟ್ ಘೋಷಣೆ ಮಾಡಿದೆ ಮಧ್ಯಾಹ್ನ ನಗರದಲ್ಲಿ ನಡೆಯುಲಿರುವ ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಗೇಡ್ ಹಾಕಿ ಬಿಗಿ ಭದ್ರತೆಯನ್ನು ಹಾಕಲಾಗಿದ್ದು ನಗರದ ಎಂ.ಜಿ. ರೋಡ್, ಐ.ಜಿ. ರೋಡ್ ನಲ್ಲಿ ಪೊಲೀಸ್ ಸರ್ಪಗಾವಲು ನಿರ್ಮಿಸಲಾಗಿದೆ ಪೊಲೀಸ್ ಇಲಾಖೆಯಿಂದ ನಗರದ ಎಂ.ಜಿ.ರಸ್ತೆಯನ್ನು ಕ್ಲೋಸ್ ಮಾಡಲಾಗಿದೆ ಹಾಗೂ ನಗರದ ಎಂ.ಜಿ. ರಸ್ತೆಯ ಅಂಗಡಿ ಮುಗ್ಗಟ್ಟುಗಳು ಬೆಳಿಗ್ಗಿನಿಂದಲೂ ಕ್ಲೋಸ್ ಆಗಿದ್ದು ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಪೊಲೀಸ್ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g