ನಾಗಮಂಗಲ ಕೋಮು ದಳ್ಳುರಿಗೆ ರಾಜ್ಯ ಸರ್ಕಾರವೇ ನೇರ ಹೊಣೆ : ಸಿ.ಟಿ ರವಿ ಕಿಡಿ
1 min read
ನಾಗಮಂಗಲ ಕೋಮು ದಳ್ಳುರಿಗೆ ರಾಜ್ಯ ಸರ್ಕಾರವೇ ಕಾರಣವಾಗಿದ್ದು ಕಾಂಗ್ರೇಸ್ಸಿಗರಿಗೆ ಮತಾಂಧತೆ ಗುಮ್ಮ ನೆತ್ತಿಗೇರಿದೆ ಎಂದು ಎಂಎಲ್.ಸಿ ಸಿ.ಟಿ ರವಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗಮಂಗಲ ಗಲಾಟೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಟ್ವಿಟರ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಎಂಎಲ್.ಸಿ ಸಿ.ಟಿ.ರವಿ ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮತಾಂಧತೆ ಮಿತಿ ಮೀರಿದೆ ಎಂದಿರುವ ಅವರು
ಮತಾಂಧತೆಯ ಗುಮ್ಮ ಕಾಂಗ್ರೆಸ್ ನವರ ನೆತ್ತಿಗೆ ಏರಿದೆ ಅವರ ಈ ನೀತಿ
ಯಿಂದ ಹಿಂದೂಗಳು ನಿತ್ಯ ನೋವು ಪಡುವಂತಾಗಿದೆ, ಕಲ್ಲು ಭಯೋತ್ಪಾದಕರಿಂದ ವಿಘ್ನ ವಿನಾಶಕನ ಮೇಲೆ ದಾಳಿ ನಡೆದಿದೆ ಎಂದು ರವಿ ಆಕ್ರೋಶ ವ್ಯಕ್ತಪಡಿಸಿದ್ದ
ಮಚ್ಚು-ಲಾಂಗು ಹಿಡಿದು ಗಣೇಶನ ಮೇಲೆ ಗಲಾಟೆ ಮಾಡಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆಲ್ಲಾ ಉತ್ತರ ಪ್ರದೇಶ ಮಾದರಿ ಸರ್ಕಾರವೇ ಸರಿಯಾದ ಮದ್ದು ಎಂದು ಸಿ.ಟಿ.ರವಿ ಹೇಳಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g