September 19, 2024

MALNAD TV

HEART OF COFFEE CITY

ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಎರಡು ಮುಖ ಅನಾವರಣ

1 min read

ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ರೀತಿಯ ಪೊಲೀಸ್ ಅಧಿಕಾರಿಗಳನ್ನ ನೀವು ಕಾಣಬಹುದು ಒಬ್ಬರು ತಮ್ಮ ಅಧೀನ ಮಹಿಳಾ ಸಿಬ್ಬಂದಿಗಳಿಗೆ ಕಿರುಕುಳ ಕೊಟ್ಟು ಸುದ್ದಿಯಲ್ಲಿದ್ದರೆ ಮತ್ತೆ ಒಬ್ಬರು ತಮ್ಮ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಗಳಿಗೆ ಬಾಗೀನ ಕೊಟ್ಟು ಸಹೋದರತ್ವ ಮೆರೆದಿದ್ದಾರೆ. ಜಿಲ್ಲೆಯ ಜನರು ಪೊಲೀಸ್ ಕೆಲಸದ ವೈಖರಿ ಬಗ್ಗೆ ಒಂದೆಡೆ ಟೀಕಿಸುತ್ತಿದ್ದರೆ ಮತ್ತೊಂದೆಡೆ ಮೆಚ್ಚುಗೆ ವ್ಯಕ್ತಪಡಿಸುವ ರೀತಿಯ ವಿರೋಧಾಭಾಸ ಎದುರಾಗಿದೆ. 

 

ಎರಡು ರೀತಿಯ ಪೊಲೀಸರನ್ನು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಜನರು ನೋಡಬಹುದು

ಒಂದೆಡೆ ಸಬ್ ಇನ್ಸ್ ಪೆಕ್ಟರ್ ರಿಂದಲೇ ಮಹಿಳಾ ಪೇದೆಗೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದರೆ

ಮತ್ತೊಂದೆಡೆ ಸಬ್ ಇನ್ಸ್ ಪೆಕ್ಟರ್ ಒಬ್ಬರು ತಮ್ಮ ಠಾಣೆಯ ಮಹಿಳಾ ಪೇದೆಳಿಗೆ ಬಾಗಿನ ನೀಡಿ ಸೋದರತ್ವ ಭಾವನೆ ಮೆರೆದಿದ್ದಾರೆ. ಕೊಪ್ಪ ಪಿಎಸ್ಐ ಬಸವರಾಜ್ ವಿರುದ್ಧ ಕೆಲ ಮಹಿಳಾ ಪೇದೇಗಳಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದರೆ ಇತ್ತ ಬಾಳೆಹೊನ್ನೂರು ಪಿಎಸ್ಐ ರವೀಶ್ ರಿಂದ ನಾಲ್ವರು ಮಹಿಳಾ ಪೇದೆಗಳಿಗೆ ಬಾಗಿನ ಸಲ್ಲಿಕೆ ಆಗಿದೆ. 

ಗೌರಿ-ಗಣೇಶ ಹಬ್ಬದಂದು ಸಹೋದರರು ಅಕ್ಕ-ತಂಗಿಯರಿಗೆ ಬಾಗಿನ ನೀಡುತ್ತಾರೆ ಅದೇ ರೀತಿ

ತಮ್ಮ ಪೊಲೀಸ್ ಠಾಣೆಯ ಮಹಿಳಾ ಪೇದೆಗಳು ತಮ್ಮ ಸಹೋದರಿಯರು ಎಂದು ಬಾಗಿನವನ್ನು ಪಿಎಸ್ಐ ರವೀಶ್ ಕೊಟ್ಟಿದ್ದಾರೆ. ಅರಿಶಿನ ಕುಂಕುಮ, ಹಣ್ಣು-ಕಾಯಿ, ಬಳೆ, ಸೀರೆ, ಸ್ವಿಟ್ಸ್ ಕೊಟ್ಟು ಗೌರವ ಅರ್ಪಿಸಿದ್ದಾರೆ. ಇದೀಗ ಪಿಎಸ್ಐ ರವೀಶ್ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ. 

ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ಜನರ ಬಾಯಿಗೆ ಆಹಾರವಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!