ಚಿಕ್ಕಮಗಳೂರು: ಹುಟ್ಟೂರು ತಲುಪಿದ ಶ್ರೀನಂದಾ ಮೃತದೇಹ – ಕಣ್ಣೀರಿನ ವಿದಾಯ*

Spread the love

 

ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿ ತಾಣವಾದ ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿದ್ದ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕದಂಪಿಹಿಪ್ಪುರಮ್ ಗ್ರಾಮದ 14 ವರ್ಷದ ಬಾಲಕಿ ಶ್ರೀನಂದಾ ದುರಂತ ಅಂತ್ಯ ಇಡೀ ಪ್ರವಾಸಕ್ಕೆಂದು ಕುಟುಂಬದವರೊಂದಿಗೆ ಬಂದಿದ್ದ ಬಾಲಕಿ ಆಕಸ್ಮಿಕವಾಗಿ ನಾಪತ್ತೆಯಾದಾಗ ಆರಂಭವಾದ ಆತಂಕವು, ಸುಮಾರು ಎರಡು ಸಾವಿರ ಅಡಿ ಆಳದ ಪ್ರಪಾತದಲ್ಲಿ ಆಕೆಯ ಮೃತದೇಹ ಪತ್ತೆಯಾದಾಗ ಕುಟುಂಬಸ್ಥರ ದುಃಖದ ಕಟ್ಟೆ ಒಡೆಯಿತು . ಅತ್ಯಂತ ಕಡಿದಾದ ಮತ್ತು ದುರ್ಗಮವಾಗಿದ್ದ ಈ ಕಣಿವೆಯಿಂದ ಮೃತದೇಹವನ್ನು ಹೊರತೆಗೆಯುವುದು ರಕ್ಷಣಾ ತಂಡಕ್ಕೆ ದೊಡ್ಡ ಸವಾಲಾಗಿತ್ತು, ಆದರೂ ಸತತ ಪರಿಶ್ರಮದ ನಂತರ ಬಾಲಕಿಯ ದೇಹವನ್ನು ಮೇಲಕ್ಕೆತ್ತಲಾಯಿತು.
ನಂತರ ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಚಿಕ್ಕಮಗಳೂರು ಜಿಲ್ಲಾ ಪೊಲೀಸರ ವಿಶೇಷ ಎಸ್ಕಾರ್ಟ್ ವಾಹನದ ಭದ್ರತೆಯೊಂದಿಗೆ ಬಾಲಕಿಯ ಶರೀರವನ್ನು ಆಕೆಯ ತವರಿಗೆ ಕಳುಹಿಸಿಕೊಡಲಾಯಿತು. ಅಂಬುಲೆನ್ಸ್ ಬಾಲಕಿಯ ಮನೆಗೆ ತಲುಪುತ್ತಿದ್ದಂತೆ ಪೋಷಕರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಚುರುಕಾಗಿದ್ದ ಮಗು ಹೀಗೆ ಶವವಾಗಿ ಬಂದಿದ್ದನ್ನು ಕಂಡು ಗ್ರಾಮಸ್ಥರು ಮರುಗಿದರು. ನೂರಾರು ಜನರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿಯುವ ಮೂಲಕ ಶ್ರೀನಂದಾಗೆ ವಿದಾಯ ಹೇಳಿದರು.

Leave a Reply

Your email address will not be published. Required fields are marked *