ಚಿಕ್ಕಮಗಳೂರು ನಗರದ ಹೊರವಲಯದ ಹಿರೇಕೊಳಲೆ ರಸ್ತೆಯಲ್ಲಿ ಗ್ಯಾಸ್ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದ ಘಟನೆ ನಡೆದಿದೆ.
ಗ್ಯಾಸ್ ಗೋಡೌನ್ಗೆ ತೆರಳುತ್ತಿದ್ದ ಪೂರ್ಣ ಪ್ರಮಾಣದ ಗ್ಯಾಸ್ ಸಿಲಿಂಡರ್ಗಳ ಲೋಡ್ ಹೊತ್ತ ಲಾರಿ, ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ತಾಗಿ ಚರಂಡಿಯಲ್ಲಿ ನಿಂತಿದೆ. ಲಾರಿಯ ಒಂದು ಬದಿಯ ಚಕ್ರ ಚರಂಡಿಯಲ್ಲಿ ಗಟ್ಟಿಯಾಗಿ ಸಿಲುಕಿಕೊಂಡ ಪರಿಣಾಮ ವಾಹನ ಸಂಪೂರ್ಣ ಪಲ್ಟಿಯಾಗದೇ ಬಾಗಿದ ಸ್ಥಿತಿಯಲ್ಲೇ ನಿಂತಿದೆ.
ಲಾರಿ ಸಂಪೂರ್ಣ ಪಲ್ಟಿಯಾಗಿದ್ದರೆ ವಿದ್ಯುತ್ ಕಂಬ ಮುರಿದು ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಚಕ್ರ ಚರಂಡಿಯಲ್ಲಿ ಸಿಲುಕಿಕೊಂಡ ಕಾರಣ ಬಾರಿ ದುರಂತವು ಕೂದಲೆಳೆ ಅಂತರದಲ್ಲಿ ತಪ್ಪಿದೆ.ಘಟನೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು,
















Leave a Reply